ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ವತಿಯಿಂದ ಆರ್ಥಿಕ ನೆರವು

Update: 2016-11-04 06:53 GMT

ಕೊಣಾಜೆ, ನ.4: ಎಸ್‌ಇಡಿಸಿ ಸ್ಪಟಿಕ ಸಂಭ್ರಮ ಕಾರ್ಯಕ್ರಮದ ಸಮಾರೋಪ ಸಮಾರಂಭ ನ.12ರಂದು ಮಂಗಳೂರು ನೆಹರೂ ಮೈದಾನದಲ್ಲಿ ನಡೆಯಲಿದ್ದು, ಇದರ ಪ್ರಯುಕ್ತ ಸೋಮೇಶ್ವರ ಉಚ್ಚಿಲದಲ್ಲಿ ಬಡಕುಟುಂಬವೊಂದಕ್ಕೆ ಧನಸಹಾಯ ನೀಡಲಾಯಿತು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್‌ ಅಧ್ಯಕ್ಷ ಇಲ್ಯಾಸ್ ಸಖಾಫಿ, ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಕುಂಪಲ, ತೊಕ್ಕೊಟ್ಟು ಸೆಕ್ಟರ್‌ನ ಉಪಾಧ್ಯಕ್ಷ ಸಯಿದ್ ಮಂಚಿಲ, ಉದ್ಯಮಿ ಫಾರೂಕ್, ಮಂಚಿಲ ಹನೀಫ್ ಮುಕ್ಕಚ್ಚೇರಿ, ಬಾತಿಷ್ ಮಂಚಿಲ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News