ಬಂಟ್ವಾಳ ವನದುರ್ಗಾ ಕ್ಷೇತ್ರಕ್ಕೆ ನಟ ಸುದೀಪ್, ರವಿಶಂಕರ್ ಭೇಟಿ

Update: 2016-11-04 07:22 GMT

ಬಂಟ್ವಾಳ, ನ.4: ಕನ್ನಡ ಚಿತ್ರರಂಗದ ಖ್ಯಾತ ನಟರು ಗುರುವಾರ ಸಂಜೆ ಬಿ.ಸಿ.ರೋಡ್ ಸಮೀಪದ ಮೊಡಂಕಾಪುವಿನ ಶ್ರೀ ವನದುರ್ಗಾ ಜಲಂತರ್ಗತ ನಾಗ ಸಾನಿಧ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಬಿಗ್‌ಬಾಸ್‌ನ ನಿರೂಪಕ ನಟ ಕಿಚ್ಚ ಸುದೀಪ್, ಖಳನಾಯಕ ನಟ ರವಿಶಂಖರ್, ರವೀಶ್ ನಾಗ ಸಾನಿಧ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ದೇವಾಲಯದ ಮುಖ್ಯಸ್ಥ ಗುರುದತ್ ಶೆಣೈ, ಪಾಂಡುರಂಗ ಶೆಣೈ, ಭೂಮಿಕ ಶೆಣೈ, ರಾಜೇಶ್ ಭಟ್ ಬಿ.ಸಿ.ರೋಡ್, ಪುಷ್ಪರಾಜ್ ಮೊದಲಾದವರು ನಟರನ್ನು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News