ಮಂಗಳೂರು: ‘ಜೋಸ್ ಆಲುಕ್ಕಾಸ್’ನ ನವೀಕೃತ ಶೋರೂಂ ಉದ್ಘಾಟನೆ

Update: 2016-11-05 13:35 GMT

ಮಂಗಳೂರು, ನ.5: ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಚಿನ್ನ ಮತ್ತು ವಜ್ರಾಭರಣ ಮಳಿಗೆ ‘ಜೋಸ್ ಆಲುಕ್ಕಾಸ್’ನ ನವೀಕೃತ ಶೋರೂಂನ್ನು ಮನಪಾ ಆರೋಗ್ಯ, ಶಿಕ್ಷಣ, ಸಾರ್ವಜನಿಕ ನ್ಯಾಯ ಸಮಿತಿಯ ಅಧ್ಯಕ್ಷೆ ಕವಿತಾ ಸನಿಲ್ ಶನಿವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಗ್ರಾಹಕರಿಗೆ ಸಂತೃಪ್ತಿಯ ಸೇವೆ ನೀಡುವಲ್ಲಿ ‘ಜೋಸ್ ಆಲುಕ್ಕಾಸ್’ ಸಂಸ್ಥೆ ಯಶಸ್ವಿಯಾಗಿದೆ. ಗ್ರಾಹಕ ಸ್ನೇಹಿ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋದಲ್ಲಿ ಯಶಸ್ಸು ಸಾಧ್ಯ ಎಂದು ಹೇಳಿದರು.

ಚಿತ್ರನಟ ರೂಪೇಶ್ ಶೆಟ್ಟಿ ಮತ್ತು ಚಿತ್ರನಟಿ ಜೆನಿಫರ್ ‘ವಜ್ರಾಭರಣ’ದ ಕೌಂಟರ್ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭ ಸಂಸ್ಥೆಯ ಮ್ಯಾನೇಜರ್‌ಗಳಾದ ಆಗಸ್ಟಿನ್ ಕೆ.ಪಿ., ಗ್ಲಿಂಟೋ ಜೋನಿ ಉಪಸ್ಥಿತರಿದ್ದರು. ರಾಕೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭ ‘ಜೋಸ್ ಆಲುಕ್ಕಾಸ್’ನ 7ನೆ ವಾರ್ಷಿಕೋತ್ಸವವನ್ನು ಮುಖ್ಯ ಅತಿಥಿಗಳ ಜೊತೆ ಮಳಿಗೆಯ ಸಿಬ್ಬಂದಿ ವರ್ಗ ಆಚರಿಸಿ ಸಂಭ್ರಮಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News