ದೇಶದ ಅಭಿವೃದ್ಧಿಗೆ ಸಂಶೋಧನೆಗಳು ಅವಶ್ಯಕ: ದೇವೇಶ್ ರಾಜಾಧ್ಯಕ್ಷ್

Update: 2016-11-06 12:03 GMT

ಉಡುಪಿ, ನ.6: ನವೀನ ಮಾದರಿಯ ಸಂಶೋಧನೆಗಳು ದೇಶದ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಅತ್ಯಂತ ಅಗತ್ಯ ಎಂದು ಸ್ಮಾರ್ಟಿಪೈ ಹೆಲ್ತ್ ಕೇರ್‌ನ ಹಿರಿಯ ವಿಜ್ಞಾನಿ ಹಾಗೂ ಸೆರಾ ಲ್ಯಾಬ್ಸ್‌ನ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದೇವೇಶ್ ರಾಜಾಧ್ಯಕ್ಷ್ ಹೇಳಿದ್ದಾರೆ.

ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಏರ್ಪಡಿಸಲಾದ ವಿಜ್ಞಾನ ಮಾದರಿ ಗಳ ಪ್ರದರ್ಶನ ಮತ್ತು ಸ್ಪರ್ಧೆ ‘ಆವಿಷ್ಕಾರ್’ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆಯನ್ನು ಸೋದೆ ವಾದಿರಾಜ ಮಠದ ಕಾರ್ಯದರ್ಶಿ ರತ್ನ ಕುಮಾರ್ ವಹಿಸಿದ್ದರು. ಮಣಿಪಾಲದ ಐಕಾಸ್‌ನ ಭೌತಶಾಸ್ತ್ರ ವಿಭಾಗದ ಪ್ರೊ.ಕೆ.ಶ್ರೀನಿವಾಸ್ ಐತಾಳ್, ಮಣಿಪಾಲ ಎಂಐಟಿ ಭೌತಶಾಸ್ತ್ರ ವಿಭಾಗದ ಡಾ.ರವಿಪ್ರಕಾಶ್ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲ ಪ್ರೊ.ಡಾ.ತಿರುಮಲೇಶ್ವರ್ ಭಟ್ ಸ್ವಾಗತಿಸಿದರು. ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ರಾಜೇಶ್ ನಾಯಕ್ ವಂದಿಸಿದರು. ಸೌಮ್ಯಾ ಭಟ್ ಕಾರ್ಯಕ್ರಮ ನಿರೂಪಿಸಿದರು.

70ಕ್ಕೂ ಮಿಕ್ಕಿದ ವಿದ್ಯಾರ್ಥಿ ತಂಡಗಳಿಂದ ಅವಿಷ್ಕರಿಸಿ ತಯಾರಿಸಲ್ಪಟ್ಟ ವಿಜ್ಞಾನ ಮಾದರಿಗಳ ಪ್ರದರ್ಶನ ನಡೆಯಿತು.

ಲಿಟ್ಲ್‌ರಾಕ್‌ಗೆ ಪ್ರಶಸ್ತಿ

ಸ್ಪರ್ಧೆಯಲ್ಲಿ ಬ್ರಹ್ಮಾವರದ ಲಿಟ್ಲ್‌ರಾಕ್ ಸ್ಕೂಲ್ ವಿದ್ಯಾರ್ಥಿಗಳಾದ ಗೀವ್, ಸೋಹನ್ ಏಂಜೆಲೊ, ಮೋಹಿತ್ ಶ್ಯಾಮ್ ಪ್ರಥಮ, ಮಂಗಳೂರಿನ ಕೆನರಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಗಳಾದ ಪವನ್ ಶೆಟ್ಟಿ, ಪವನ್ ಕುಮಾರ್, ಸಿದ್ದಾರ್ಥ್ ದ್ವಿತೀಯ, ಇನ್ನಂಜೆಯ ಎಸ್‌ವಿಎಚ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ, ದೀಪಕ್ ಟಿ.ಎಸ್., ಕಾರ್ತಿಕ್, ಸುಹಾಸ್ ಜೋಗಿ ತೃತೀಯ ಸ್ಥಾನ ಪಡೆ ದರು. ಕಲ್ಯಾಣಪುರ ತ್ರಿಷಾ ಕಾಲೇಜು, ಕೋಟ ವಿವೇಕ ಕಾಲೇಜು, ಮೂಡ ಬೆಳ್ಳೆ ಸಂತ ಲಾರೆನ್ಸ್ ಕಾಲೇಜು ಸಮಾಧಾನಕರ ಬಹುಮಾನ ಪಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಸೋದೆ ಮಠಾಧೀಶ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ ಬಹುಮಾನ ವಿತರಿಸಿದರು. ಮಣಿಪಾಲದ ಐಕಾಸ್‌ನ ಭೌತಶಾಸ್ತ್ರ ವಿಭಾಗದ ಪ್ರೊ. ಕೆ.ಶ್ರೀನಿವಾಸ್ ಐತಾಳ್ ಮುಖ್ಯ ಅತಿಥಿಯಾಗಿದ್ದರು.

ಸಂಸ್ಥೆಯ ಉಪಾಧ್ಯಕ್ಷ ಶ್ರೀನಿವಾಸ ತಂತ್ರಿ, ಸೋದೆ ವಾದಿರಾಜ ಮಠ ಶಿಕ್ಷಣ ಟ್ರಸ್ಟ್ ಪ್ರತಿನಿಧಿ ರಾಘವೇಂದ್ರ ತಂತ್ರಿ, ಪ್ರಾಂಶುಪಾಲ ಪ್ರೊ.ಡಾ.ತಿರುಮ ಲೇಶ್ವರ್ ಭಟ್ ಉಪಸ್ಥಿತರಿದ್ದರು. ಗಣಕ ಯಂತ್ರಜ್ಞಾನ ವಿಭಾಗದ ವೇಣು ಗೋಪಾಲ್ ರಾವ್ ಸ್ವಾಗತಿಸಿದರು. ಲಕ್ಷ್ಮೀ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News