ರಾಷ್ಟ್ರಮಟ್ಟದ ಚೆಸ್: ವೇಣೂರಿನ ಸ್ವಾತಿ ಭಟ್‌ಗೆ ಕಂಚಿನ ಪದಕ

Update: 2016-11-06 17:53 GMT

ವೇಣೂರು, ನ.6: ಬೆಳ್ತಂಗಡಿ ತಾಲೂಕು ವೇಣೂರು ಬಜಿರೆ ಗ್ರಾಮದ ಕಲ್ಲುಕಡ್ತಿಮಾರು ನಿವಾಸಿ ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ಸ್ವಾತಿ ಕೆ. ಭಟ್ ಅವರು ರಾಷ್ಟ್ರಮಟ್ಟದ ಚದುರಂಗ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಕಂಚಿನ ಪದಕ ಪಡೆದಿದ್ದಾರೆ.

ರಾಯಚೂರಿನ ಸಿಂಧನೂರಿನಲ್ಲಿ ಜರಗಿದ 19ರ ವಯೋಮಿತಿಯೊಳಗಿನ ಬಾಲಕಿಯರ ರಾಜ್ಯಮಟ್ಟದ ಚದುರಂಗ ಸ್ಪರ್ಧೆಯಲ್ಲಿ ವಿಜೇತರಾಗಿ ಆಂದ್ರಪ್ರದೇಶದ ಹೈದರಾಬಾದ್‌ನಲ್ಲಿ ಜರಗಿದ ರಾಷ್ಟ್ರಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕ ಗಳಿಸಿದ್ದಾರೆ.

ಇವರು ಬಜಿರೆ ಕಲ್ಲುಕಡ್ತಿಮಾರು ಸೋಮನಾಥ ಭಟ್ ಮತ್ತು ಪದ್ಮಾವತಿ ಪಿ. ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News