ಅಮೀನ್ ಮಟ್ಟು ಮುಖ್ಯಮಂತ್ರಿಯ ದಾರಿ ತಪ್ಪಿಸುತ್ತಿದ್ದಾರೆ
Update: 2016-11-08 11:15 GMT
ಮಂಗಳೂರು, ನ.8: ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಬೇಕಾಬಿಟ್ಟಿ ಸಲಹೆಗಳನ್ನು ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಜನಾರ್ದನ ಪೂಜಾರಿ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಅವನತಿಗೆ ಅವರೊಬ್ಬರೇ ಸಾಕು. ಮುಖ್ಯಮಂತ್ರಿಯವರಿಗೆ ಜ್ಞಾನವಿದ್ದಲ್ಲಿ ಅವರನ್ನು ತಕ್ಷಣ ಬದಲಾಯಿಸಬೇಕು ಹಾಗೂ ಬಿಜೆಪಿಗರು ಆಗ್ರಹಿಸುವಂತೆ ದಿನೇಶ್ರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಮಂಗಳೂರು ಗೋಕರ್ಣನಾಥ ಕ್ಷೇತ್ರವನ್ನು ಸಮಾಧಿ ಎಂದು ಟೀಕೆ ಮಾಡಿದ ಮಟ್ಟುವೇ ಸಮಾಧಿಯಾಗಲಿದ್ದಾರೆ ಎಂದು ಮಟ್ಟು ಅವರ ಸಾಮಾಜಿಕ ಜಾಲತಾಣದ ಬರಹಕ್ಕೆ ಜನಾರ್ದನ ಪೂಜಾರಿ ಆಕ್ಷೇಪಿಸಿದರು.