ಗಲ್ಫ್ ಗೈಸ್ ಹೆಲ್ಪ್‌ಲೈನ್‌ನಿಂದ ಧನಸಹಾಯ

Update: 2016-11-08 12:57 GMT

ಮಂಗಳೂರು, ನ.8: ಮಂಗಳೂರು ತಾಲೂಕಿನ ಕುಪ್ಪೆಪದವು ವ್ಯಾಪ್ತಿಯ ಬದ್ರಿಯಾ ಜುಮಾ ಮಸೀದಿಗೆ ಒಳಪಟ್ಟ ಆಚಾರಿಜೋರ ಬಳಿ ನಿವಾಸಿ ಝಕರಿಯಾ ಅವರಿಗೆ ಗಲ್ಫ್‌ಗೈಸ್ ಹೆಲ್ಪ್‌ಲೈನ್ ವತಿಯಿಂದ ಧನಸಹಾಯ ನೀಡಲಾಯಿತು.

ಝಕರಿಯಾ ಅವರು ಬಾಲ್ಯದಲ್ಲೇ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದು, ಇತ್ತೀಚೆಗೆ ನಡೆದ ಅಫಘಾತವೊಂದರಲ್ಲಿ ತನ್ನ ಇನ್ನೊಂದು ಕಣ್ಣಿನ ದೃಷ್ಟಿಯನ್ನೂ ಕಳೆದುಕೊಂಡಿದ್ದರು. ಮಡದಿ ಹಾಗೂ ಇಬ್ಬರ ಮಕ್ಕಳ ಜೊತೆಗೆ ಜೀವನ ನಡೆಸುತ್ತಿದ್ದು, ಸಣ್ಣ ಗೂಡಂಗಡಿ ನಡೆಸಿಕೊಂಡು ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದರು. ಇವರ ಸಂಕಷ್ಟವನ್ನು ಮನಗಂಡು ಗಲ್ಫ್ ಗೈಸ್ ಹೆಲ್ಪ್‌ಲೈನ್ ವಾಟ್ಸ್‌ಅಪ್ ಗ್ರೂಪ್‌ನ ಸದಸ್ಯರು 50 ಸಾವಿರ ರೂ.ಗಳನ್ನು ಒಟ್ಟುಗೂಡಿಸಿದ್ದು, ಈ ಧನಸಹಾಯವನ್ನು ಝಕರಿಯಾರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭ ಗಲ್ಫ್‌ಗೈಸ್ ಹೆಲ್ಪ್‌ಲೈನ್‌ನ ಮುಖ್ಯ ಸಲಹೆಗಾರ ಸುಹೈಲ್ ಕಂದಕ್, ಅಡ್ಮಿನ್ ಅಶ್ರಫ್ ಉಪ್ಪಿನಂಗಡಿ ಹಾಗೂ ಸದಸ್ಯರಾದ ಅನ್ಸಾರ್, ಮತ್ತು ರಿಯಾನ್ ಕುಪ್ಪೆಪದವು ಜಮಾಅತ್ ಕಾರ್ಯದರ್ಶಿ ಅನ್ವರ್ ಸಾದತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News