ಕೊಣಾಜೆ: ಸೀಮೆಎಣ್ಣೆ ಸುರಿದುಕೊಂಡು ವೃದ್ಧ ಆತ್ಮಹತ್ಯೆ

Update: 2016-11-10 14:10 GMT

ಕೊಣಾಜೆ, ನ.10: ವೃದ್ಧರೊರ್ವರು ಮೈಗೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಘಟನೆಕೊಣಾಜೆ ಠಾಣಾ ವ್ಯಾಪ್ತಿಯ ಮಾರಿಯಮ್ಮಗೋಳಿ ಕಂಬ್ಲಕೋಡಿ ಎಂಬಲ್ಲಿ ಗುರುವಾರ ಸಂಭವಿಸಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ದೇಜಪ್ಪಪೂಜಾರಿ ಎಂದು ಗುರುತಿಸಲಾಗಿದೆ. 

ಇತ್ತೀಚೆಗೆ ಹೊಸ ಮನೆಯೊಂದನ್ನು ಕಟ್ಟುತ್ತಿದ್ದು ಮನೆಯ ಕೆಲಸ ಬಹುತೇಕ ಪೂರ್ಣಗೊಂಡಿತ್ತು. ಗುರುವಾರ ಹೊಸಮನೆಯ ಎದುರೇ ಅವರು ಸೀಮೆ ಎಣ್ಣೆ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಓರ್ವ ಪುತ್ರಿಯಿದ್ದು, ವಿವಾಹವಾಗಿತ್ತು. ಮನೆಯಲ್ಲಿ ದಂಪತಿ ಮಾತ್ರ ವಾಸವಾಗಿದ್ದರು ಎಂದು ತಿಳಿದುಬಂದಿದೆ. 

ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News