×
Ad

ನ.13ರಂದು ಮಂಗಳೂರಿನಲ್ಲಿ ಹವೇಲಿ ಮಲ್ಟಿ ಕ್ಯುಸಿನ್ಸ್ ರೆಸ್ಟೋರೆಂಟ್ ಉದ್ಘಾಟನೆ

Update: 2016-11-10 22:04 IST

ಮಂಗಳೂರು, ನ.10: ಸೌದಿ ಅರೇಬಿಯದಲ್ಲಿ ನೆಲೆಸಿರುವ ಮಂಗಳೂರು ಮೂಲದವರಾದ ಶೇಖ್ಸ್ ಸಹೋದರರ ಮಾಲಕತ್ವದಲ್ಲಿ ಹವೇಲಿ ಮಲ್ಟಿ ಕ್ಯುಸಿನ್ಸ್ ರೆಸ್ಟೋರೆಂಟ್ ನವೆಂಬರ್ 13ರಂದು ಕದ್ರಿ ರಸ್ತೆಯ ಬಳಿಯ ಯೆನೆಪೋಯ ಮಾಲ್‌ನಲ್ಲಿ ಶುಭಾರಂಭಗೊಳ್ಳಲಿದೆ. ರಾಜ್ಯ ಆರೋಗ್ಯ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ ಎಂದು ರೆಸ್ಟೋರೆಂಟ್‌ನ ಆಡಳಿತ ನಿರ್ದೇಶಕ ವಜೀರ್ ಬಾಷಾ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಂಸ್ಥೆಯ ವೆಬ್‌ಸೈಟನ್ನು ಶಾಸಕ ಜೆ.ಆರ್.ಲೋಬೊ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಯೆನೆಪೊಯ ವಿಶ್ವ ವಿದ್ಯಾನಿಲಯದ ಕುಲಪತಿ ಯೆನೆಪೊಯ ಅಬ್ದುಲ್ಲಾ ಕುಂಞ, ಶಾಸಕ ಮೊಯ್ದೀನ್ ಬಾವ, ಶಾಸಕ ಐವನ್ ಡಿಸೋಜ,ಮನಪಾ ಮೇಯರ್ ಹರಿನಾಥ್, ಮಂಗಳಾ ಆಸ್ಪತ್ರೆಯ ಎಂ.ಡಿ ಗಣಪತಿ ಪಿ., ಕದ್ರಿ ವೃತ್ತ ನಿರೀಕ್ಷಕ ಮಾರುತಿ ನಾಯಕ್, ಸದಾನಂದ ನಾಯಕ್,ಸಿ.ಎಸ್.ಚೇತನ್ ನಾಯಕ್, ಡಾ.ಶಿವರಾಮ ರೈ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ರೆಸ್ಟೋರೆಂಟ್‌ನ ಆಡಳಿತ ನಿರ್ದೇಶಕ ವಜೀರ್ ಬಾಷಾ ತಿಳಿಸಿದ್ದಾರೆ.

ಸೌದಿ ಅರೇಬಿಯದ ಶೇಖ್ಸ್ ಗ್ರೂಪ್ ಹೊಟೇಲಿನ ಪಾಲುದಾರರಾಗಿ ಶಬ್ಬೀರ್ ಶೇಖ್, ಜಹೀರ್ ಶೇಖ್, ನಾಸಿರ್ ಅಹ್ಮದ್ ಶೇಖ್, ಮುನೀರ್ ಅಹ್ಮದ್ ಶೇಖ್, ಮುಹಮ್ಮದ್ ನಝಾರ್ ಮೊಹಿದಿನ್ ಮತ್ತು ವಜೀರ್ ಬಾಷಾ ಈ ಹಿಂದೆ 2009ರಲ್ಲಿ ಸೌದಿ ಅರೇಬಿಯದ ಜಿದ್ದಾದಲ್ಲಿ ವಿವಿಧ ಭಾರತೀಯ ಖಾದ್ಯಗಳ ರಾಜ್ ರೆಸ್ಟೋರೆಂಟ್ ಹಾಗೂ 2016ರಲ್ಲಿ ಸೌದಿಯ ಜುಬೇರ್‌ನಲ್ಲಿ ದೋಸಾವರ್ಲ್ಡ್ ರೆಸ್ಟೋರೆಂಟ್ ಆರಂಭಿಸಿ ಅನುಭವ ಹೊಂದಿದವರು.

ಭಾರತದಲ್ಲಿ ಶೇಖ್ಸ್ ಸಮೂಹದಿಂದ ಪ್ರಥಮ ರೆಸ್ಟೋರೆಂಟ್ ಮಂಗಳೂರಿನಲ್ಲಿ ಆರಂಭವಾಗಲಿದೆ. ಹವೇಲಿ ಮಲ್ಟಿ ಕ್ಯುಸಿನ್ ಇಂಡಿಯನ್, ಚೈನೀಸ್, ಕಾಂಟಿನೆಂಟಲ್, ತಂದೂರ್ ವಿಶೇಷತೆಗಳನ್ನು ಹೊಂದಿದೆ ಹಾಗೂ ನುರಿತ ಬಾಣಸಿಗರಾದ ಜಸ್ವೀರ್ ಸಿಂಗ್, ಗೋವಿಂದ್‌ರಾವತ್, ವಿ.ಪಿ.ಭಟ್ ರೆಸ್ಟೊರೆಂಟ್‌ನ ಚೆಫ್‌ಗಳಾಗಿದ್ದಾರೆ.

ಮಿತದರದಲ್ಲಿ ಸಸ್ಯಹಾರ, ಮಾಂಸಹಾರಗಳಲ್ಲಿ ಗುಣಮಟ್ಟದ ಗರಿಷ್ಠ,ರುಚಿಕರ ಖಾದ್ಯಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ . ರೆಸ್ಟೋರೆಂಟ್‌ನಲ್ಲಿ ಕುಟುಂಬದ ಸದಸ್ಯರು ಬಂದು ಪ್ರತ್ಯೇಕವಾಗಿ ಉಪಹಾರ ಸೇವಿಸಲು ವಿಶೇಷ ಡೈನಿಂಗ್ ಏರಿಯಾ ಜೊತೆಗೆ ಪಾರ್ಟಿಹಾಲ್, ಫ್ಯಾಮಿಲಿ ಕ್ಯಾಬಿನ್ ವ್ಯವಸ್ಥೆ ಇದೆ ಎಂದು ರೆಸ್ಟೋರೆಂಟ್‌ನ ಆಡಳಿತ ನಿರ್ದೇಶಕ ವಜೀರ್ ಬಾಷಾ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹವೇಲಿ ರೆಸ್ಟೋರೆಂಟ್‌ನ ಪಾಲುದಾರರಾದ ಶಬ್ಬೀರ್ ಶೇಖ್, ನಾಸಿರ್ ಅಹ್ಮದ್ ಶೇಖ್ ಹಾಗೂ ಮ್ಯಾನೇಜರ್ ದೀಪಕ್ ನೇಗಿ ಚೆಫ್‌ಗಳಾದ ಜಸ್ವೀರ್ ಸಿಂಗ್, ಗೋವಿಂದ್ ರಾವತ್, ವಿ.ಪಿ.ಭಟ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News