ಕೆಎಸ್ಸಾರ್ಟಿಸಿಯ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸಿಐಟಿಯು ಧರಣಿ

Update: 2016-11-11 03:25 GMT

ಕಾಸರಗೋಡು, ನ.11: ಕೇರಳ  ರಾಜ್ಯ ರಸ್ತೆ ಸಾರಿಗೆ ನಿಗಮದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ  ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆ ( ಸಿಐಟಿಯು ) ವತಿಯಿಂದ  ಕಾಸರಗೋಡು ಕೆಎಸ್ಸಾರ್ಟಿಸಿ ಬಸ್ ಡಿಪೊ ಮುಂಭಾಗದಲ್ಲಿ  ಧರಣಿ ನಡೆಯಿತು.

ಧರಣಿಯನ್ನು  ಸಿಐಟಿಯು  ಜಿಲ್ಲಾ ಕಾರ್ಯದರ್ಶಿ  ಮೋಹನ್ ಕುಮಾರ್ ಪಾಡಿ  ಉದ್ಘಾಟಿಸಿದರು. ಕೆ. ಕುಂಞಿರಾಮನ್  ಅಧ್ಯಕ್ಷತೆ  ವಹಿಸಿದ್ದರು. ಕೆ.ಗಣೇಶ್, ವಿ.ರತೀಶ್, ಪಿ. ಕುಂಞಿರಾಮನ್ ,  ಕೆ.ಎಂ. ಬಾಲಕೃಷ್ಣನ್,  ಕೆ.ಪಿ. ಶೈಜು ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News