ಮುಸ್ತಫಾ ಹತ್ಯೆಗೆ ಎಸ್ಕೆಎಸ್ಸೆಸ್ಸೆಫ್ ಖಂಡನೆ

Update: 2016-11-11 04:56 GMT

ಮಂಗಳೂರು, ನ.11: ಮೈಸೂರು ಜೈಲಿನಲ್ಲಿ ನಡೆದ ಮುಸ್ತಫಾ ಕೊಲೆಯು ಹಲವಾರು ಅನುಮಾನಗಳಿಂದ ಕೋಡಿದ್ದು ಪ್ರತ್ಯಕ್ಷವಾಗಿ ಅದೊಂದು ವ್ಯವಸ್ಥಿತ, ಪೂರ್ವ ನಿರ್ಧರಿತ ಸಂಚು ಎಂದು ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಆರೋಪಿಸಿದ್ದಾರೆ.

ಕಾನೂನು ವ್ಯವಸ್ಥೆಯು ಅದರ ಪರಾಕಾಷ್ಠೆಯಲ್ಲಿರಬೇಕಾದ ಸ್ಥಳದಲ್ಲಿಯೇ ಸಂರಕ್ಷಣೆ ನೀಡಲು ಸಾಧ್ಯವಾಗುತ್ತಿಲ್ಲ ಎಂದಾದರೆ ನಮ್ಮ ಪೋಲೀಸ್ ವ್ಯವಸ್ಥೆಯನ್ನು ಏನೆನ್ನಬೇಕು? ಅಲ್ಪ ಸಂಖ್ಯಾತರಿಗೆ ಜೈಲಿನೊಳಗೆ ಕೂಡ ರಕ್ಷಣೆ ಇಲ್ಲ ಎಂಬ ಆತಂಕ ಕಾಡುವಷ್ಟು ಪರಿಸ್ಥಿತಿ ಹದಗೆಟ್ಟಿದೆ ಎನ್ನುವುದು ಇದರಿಂದ ಮನದಟ್ಟಾಗುತ್ತಿದೆ. ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಸ್ಪಷ್ಟನೆ ನೀಡಬೇಕು ಮತ್ತು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News