ವಿಷ ಜಂತು ಕಚ್ಚಿ ಮೃತ್ಯು
Update: 2016-11-12 22:02 IST
ಅಮಾಸೆಬೈಲು, ನ.12: ಹಳೆ ಅಮಾಸೆಬೈಲುವಿನ ತಾರಿಗುಡ್ಡೆ ಎಂಬಲ್ಲಿ ವಿಷ ಜಂತು ಕಚ್ಚಿದ ಪರಿಣಾಮ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ತಾರಿಗುಡ್ಡೆಯ ಸಂದೇಶ ಪೂಜಾರಿ(30) ಎಂದು ಗುರುತಿಸ ಲಾಗಿದೆ. ಇವರು ನ.6ರಂದು ಮನೆಯಲ್ಲಿ ತೆಂಗಿನ ಮರದ ಬುಡ ಮಾಡು ವಾಗ ವಿಷ ಜಂತುವೊಂದು ಕಚ್ಚಿತು. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಇವರು ನ.11ರಂದು ರಾತ್ರಿ 9ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.