ಮಕ್ಕಳ ದಿನಾಚರಣೆ : ಸಮವಸ್ತ್ರ ವಿತರಣೆ

Update: 2016-11-16 11:57 GMT

ಮೂಡುಬಿದಿರೆ, ನ.16: ಕಲ್ಲಬೆಟ್ಟು ಗ್ರಾಮದ ನೀರಳಿಕೆ ಅಂಗನವಾಡಿ ಕೇಂದ್ರದಲ್ಲಿ ನಡೆದ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಸತ್ಯನಾರಾಯಣ ಸೇವಾ ಟ್ರಸ್ಟ್ ಕೆರೆಪಾದೆ ಇದರ ಅಧ್ಯಕ್ಷ, ದಾನಿ ರಮೇಶ್ ಶೆಟ್ಟಿ ಕೊಡುಗೆಯಾಗಿ ನೀಡಿದ ಸಮವಸ್ತ್ರವನ್ನು ಪುಟಾಣಿಗಳಿಗೆ ವಿತರಿಸಲಾಯಿತು.

ಪುರಸಬಾ ಮಾಜಿ ಸದಸ್ಯ ಹಸನಬ್ಬ ಅವರ ಅಧ್ಯಕ್ಷತೆಯನ್ನು ನಡೆದ ಸಬಾ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪುಟಾಣಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಸತ್ಯನಾರಾಯಣ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ಸುಕೇಶ್ ಹೆಗ್ಡೆ, ಕಾರ್ಯದರ್ಶಿ ಸುರೇಂದ್ರ ಶೆಟ್ಟಿ, ಹಿರಿಯ ಸದಸ್ಯ ಸೂರ್ಯಣ್ಣ ಹೆಗ್ಡೆ, ರವಿಪ್ರಸಾದ್, ಆರೋಗ್ಯ ಕಾರ್ಯಕರ್ತೆ ಗಿರಿಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಶಕುಂತಳಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News