ನ.17ರಿಂದ ಕೊಳಕೆಯಲ್ಲಿ 3 ದಿನಗಳ ಧಾರ್ಮಿಕ ಮತ ಪ್ರವಚನ

Update: 2016-11-16 12:49 GMT

ಬಂಟ್ವಾಳ, ನ.16: ಅಲ್ಲಜಿನತುರಿಫಾಯಿಯ್ಯ ದಫ್ ಕಮಿಟಿ ಕೊಳಕೆ ಇದರ 31ನೆ ವಾರ್ಷಿಕ ಹಾಗೂ ಎಸ್.ಎಸ್.ಎಫ್. ಇದರ 21ನೆ ವಾರ್ಷಿಕೋತ್ಸವದ ಅಂಗವಾಗಿ ಕೊಳಕೆ ಮುಹಿಯ್ಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನ. 17(ಇಂದು)ರಿಂದ ಮೂರು ದಿವಸಗಳ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ನಡೆಯಲಿದೆ. 

ಕಾರ್ಯಕ್ರಮವನ್ನು ನ. 17ರಂದು ರಾತ್ರಿ 8 ಗಂಟೆಗೆ ಅಸೈಯ್ಯದ್ ಮುಶ್ತಾಖುರಹ್ಮಾನ್ ತಂಙಳ್ ಚಟ್ಟೆಕಲ್ ಉದ್ಘಾಟಿಸಲಿದ್ದಾರೆ. ಅಂದು ನೌಫಲ್ ಸಖಾಫಿ ಕಳಸ, 18ರಂದು ರಫೀಕ್ ಸ ಅ ದಿ ದೇಲಂಪಾಡಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. 

19ರಂದು ಮಗ್ರೀಬ್ ನಮಾಝ್ ಬಳಿಕ ದಫ್ ರಾತೀಬ್, ಸಮಾರೋಪ ಸಮಾರಂಭ ನಡೆಯಲಿದ್ದು ಅಸೈಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಸಖಾಫಿ ಕಿಲ್ಲೂರು ದುಅ ನೆರವೇರಿಸಲಿದ್ದಾರೆ. ಬದ್ರುದ್ದೀನ್ ಅಹ್ಸನಿ ಅಳಕೆ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News