ಕೃಷ್ಣಮೃಗದ ಚರ್ಮ ಮಾರಾಟಕ್ಕೆ ಯತ್ನ: ಓರ್ವನ ಬಂಧನ
Update: 2016-11-16 16:38 GMT
ಬಂಟ್ವಾಳ, ನ. 16: ಕೃಷ್ಣ ಮೃಗದ ಚರ್ಮ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪುತ್ತೂರು ಅರಣ್ಯ ಸಂಚಾರ ದಳದ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಎಲಬುರ್ಗಾ ಹಿರೆವೆಂಕಲಕುಂಟೆ ನಿವಾಸಿ ಶರಣಪ್ಪ ಬಜಂತ್ರಿ(34) ಬಂಧಿತ ಆರೋಪಿ. ಈತ ಕೃಷ್ಣಮೃಗ
ದ ಚರ್ಮವನ್ನು ವಿಟ್ಲ ಬಸ್ ನಿಲ್ದಾಣದಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದ. ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಅರಣ್ಯ ಸಂಚಾರಿ ದಳದ ಪೊಲೀಸರು ಆರೋಪಿಯನ್ನು ಬಂಧಿಸಿ ಚರ್ಮ ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಪುತ್ತೂರು ಅರಣ್ಯ ಸಂಚಾರಿ ದಳದ ಎಸ್ಸೈ ಬಾಬು ಗೌಡ ಡಿ., ಸಿಬ್ಬಂದಿಯಾದ ಕುಶಾಲಪ್ಪ ಗೌಡ, ಕರುಣಾಕರ ಬಿ.ಎಸ್., ರವೀಂದ್ರ ಎಚ್.ಆರ್., ಸುಂದರ ಶೆಟ್ಟಿ, ರಾಧಾಕೃಷ್ಣ ಭಾಗವಹಿಸಿದರು.