ಪಡುವನ್ನೂರು: ಎಂಡೋ ಪೀಡಿತ ಬಾವಿಗೆ ಬಿದ್ದು ಮೃತ್ಯು
Update: 2016-11-16 18:42 GMT
ಪುತ್ತೂರು, ನ.16: ಎಂಡೋ ಪೀಡಿತನಾಗಿದ್ದ ಬುದ್ಧಿ ಮಾಂದ್ಯ ಯುವಕನೋರ್ವ ಕಾಲು ಜಾರಿ ಬಾವಿಗೆ ಬಿದ್ದ ಘಟನೆ ಮಂಗಳವಾರ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಮುಗುಳಿ ಎಂಬಲ್ಲಿ ನಡೆದಿದೆ. ಪಡುವನ್ನೂರು ಗ್ರಾಮದ ಮುಗುಳಿ ದಿ. ಸದಾನಂದ ಆಚಾರ್ಯ ಎಂಬವರ ಪುತ್ರ ಎಂಡೋಪೀಡಿತ ಬುದ್ಧಿ ಮಾಂದ್ಯನಾಗಿದ್ದ ಚಂದ್ರಕಾಂತ್(20) ಮೃತಪಟ್ಟವರು. ಅವರು ಮನೆಯ ಪಕ್ಕದಲ್ಲಿದ್ದ ಮರದ ಬೇಲಿಯ ತಡೆಗೋಡೆ ಇದ್ದ ಬಾವಿಗೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಘಟನೆ ತಿಳಿದ ತಕ್ಷಣ ಸ್ಥಳೀಯರು ಚಂದ್ರಕಾಂತ್ರನ್ನು ಬಾವಿಯಿಂದ ಮೇಲಕೆತ್ತಿದ್ದರೂ ಬಾವಿಯ ಕಲ್ಲು ತಲೆಗೆ ಜಜ್ಜಿದ್ದರಿಂದ ಚಂದ್ರಕಾಂತ್ ಮೃತಪಟ್ಟಿದ್ದರು. ಈ ಬಗ್ಗೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.