‘ಭಾರತದ ಉತ್ಕೃಷ್ಟ ಸಾರಿಗೆ ಮತ್ತು ಪ್ರವಾಸೋದ್ಯಮದ ಪ್ರದರ್ಶನಕ್ಕೆ ಚಾಲನೆ

Update: 2016-11-18 18:14 GMT

ಮಂಗಳೂರು, ನ.18: ಇಂಡಿಯಾ ಇಂಟರ್‌ನ್ಯಾಶನಲ್ ಟ್ರಾವೆಲ್ ಎಕ್ಸಿಬಿಷನ್ (ಐಐಟಿಇ) ವತಿಯಿಂದ ನಗರದ ಟಿ.ವಿ.ರಮಣ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ಏರ್ಪಡಿಸಲಾದ ಮೂರು ದಿನಗಳ ‘ಭಾರತದ ಉತ್ಕೃಷ್ಟ ಸಾರಿಗೆ ಮತ್ತು ಪ್ರವಾಸೋದ್ಯಮದ ಪ್ರದರ್ಶನ’ ಇಂದು ಉದ್ಘಾಟನೆಗೊಂಡಿತು.

ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮಹಾಪ್ರಬಂಧಕಿ ಸ್ವಾತಿ ಕಾಳೆ ಪ್ರದರ್ಶನದ ಉದ್ಘಾಟನೆ ನೆರವೇರಿಸಿದರು. ಐಐಟಿಇ ಬೆಂಗಳೂರು ಇದರ ನಿರ್ದೇಶಕ ಅನುರಾಗ್ ಗುಪ್ತ ಉಪಸ್ಥಿತರಿದ್ದರು.

ಪ್ರದರ್ಶನವು ನ.20ರವರೆಗೆ ನಡೆಯಲಿದ್ದು, ಸಾರಿಗೆ, ಪ್ರವಾಸ, ರೈಲ್ವೇಸ್, ಆತಿಥ್ಯ ಮತ್ತಿತರ ವಿಷಯಗಳಿಗೆ ಪೂರಕವಾಗಿ ಜನರಿಗೆ ಮಾಹಿತಿಯನ್ನು ಈ ಪ್ರದರ್ಶನದಲ್ಲಿ ಒದಗಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News