ಆಳ್ವಾಸ್ ದೇಹದಾರ್ಢ್ಯ ಸಿರಿ, ಕುಸ್ತಿಸಿರಿ: ಲವಿನ್ ಸೋಮೇಶ್ವರ ಮಿ. ನುಡಿಸಿರಿ, ಆತ್ಮಶ್ರೀ ನುಡಿಸಿರಿ ಕುವರಿ

Update: 2016-11-20 16:09 GMT

ಮೂಡುಬಿದಿರೆ, ನ.20: ಆಳ್ವಾಸ್ ನುಡಿಸಿರಿಯ ಅಂಗವಾಗಿ ಕರ್ನಾಟಕ ರಾಜ್ಯ ಕುಸ್ತಿ ಸಂಘ, ದ.ಕ ಜಿಲ್ಲಾ ಅಮೆಚೂರ್ ಕುಸ್ತಿ ಸಂಘ ಹಾಗೂ ಆಳ್ವಾಸ್ ವತಿಯಿಂದ ವಿದ್ಯಾಗಿರಿಯಲ್ಲಿ ಶನಿವಾರ ರಾತ್ರಿ ಮುಕ್ತಾಯಗೊಂಡ ರಾಜ್ಯ ಮಟ್ಟದ ಮಹಿಳೆಯರ ಮತ್ತು ಪುರುಷರ ಮುಕ್ತ ಆಳ್ವಾಸ್ ಕುಸ್ತಿ ಸಿರಿ, ಕರ್ನಾಟಕ ರಾಜ್ಯ ಬಾಡಿ ಬಿಲ್ಡಿಂಗ್ ಅಸೋಸಿಯೇಶನ್, ದ.ಕ. ಜಿಲ್ಲಾ ರಾಜ್ಯ ಬಾಡಿ ಬಿಲ್ಡಿಂಗ್ ಅಸೋಸಿಯೇಶನ್ ಹಾಗೂ ಆಳ್ವಾಸ್ ವತಿಯಿಂದ ದೇಹದಾರ್ಢ್ಯ ಸಿರಿಯಲ್ಲಿ ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು ಲವಿನ್ ಸೋಮೇಶ್ವರ ಮಿಸ್ಟರ್ ನುಡಿಸಿರಿ ಪ್ರಶಸ್ತಿ ಗೆದ್ದಿದ್ದಾರೆ. ಆತಿಥೇಯ ಆಳ್ವಾಸ್ ವಿದ್ಯಾರ್ಥಿನಿ ಆತ್ಮಶ್ರೀ ನುಡಿಸಿರಿ ಕುವರಿ ಪ್ರಶಸ್ತಿ ಗೌರವ ತನ್ನದಾಗಿಸಿಕೊಂಡಿದ್ದಾರೆ. ಇದೇ ವೇಳೆ ಬೆಂಗಳೂರಿನ ನಾಗರಾಜ ಎಂ. ’ನುಡಿಸಿರಿ ಕುವರ’ ಹಾಗೂ ಧಾರವಾಡ ಎಸ್.ಟಿ.ಸಿಯ ರಿಯಾಝ್ ಆರ್. ಮುಲ್ಲಾ ಆಳ್ವಾಸ್ ನುಡಿಸಿರಿ ಕೇಸರಿ ಗೌರವ ತನ್ನದಾಗಿಸಿಕೊಂಡಿದ್ದಾರೆ.

ಆಳ್ವಾಸ್ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್, ಶಾಸಕ ಚಂದ್ರಕಾಂತ ಬೆಲ್ಲದ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.

ದೇಹದಾರ್ಡ್ಯ ಸಿರಿಯ ಫಲಿತಾಂಶ ವಿವರ 

55 ಕೆ.ಜಿ. ವಿಭಾಗ: 1. ಪ್ರತಾಪ್ ಕಲ್ಕುಂದ್ರಿಕಾರ್ ಬೆಳಗಾಂ, 2. ನಿತೇಶ್ ಪೂಜಾರಿ ದ.ಕ 3. ನೀಲೇಶ್ ಖಾನ್ನುಕಾರ್ ಬೆಳಗಾಂ.

60 ಕೆ.ಜಿ.ವಿಭಾಗ: 1. ವಿಘ್ನೇಶ್ ಉಡುಪಿ, 2. ನಿಶಾವ್ ದ.ಕ 3. ಉಮೇಶ್ ಗಂಗಮೆ ಬೆಳಗಾಂ

65 ಕೆ.ಜಿ ವಿಭಾಗ: 1.ವಿಕಾಸ್ ಬೆಳಗಾಂ, 2. ಬಾನುಪ್ರಸಾದ್ ಶಿವಮೊಗ್ಗ 3. ವಿನಾಯಕ ಕೋಲ್ಕರ್ ಬೆಳಗಾಂ.

70 ಕೆ.ಜಿ.ವಿಭಾಗ: 1.ಅಕ್ಮಲ್ ಪಾಶಾ 2. ನಾಗರಾಜ್ ಕೋಲ್ಕರ್ ಬೆಳಗಾಂ. 3. ವಿಕ್ರಾಂತ್ ಧಮ್ನೇಕರ್ ಬೆಳಗಾಂ

75 ಕೆ.ಜಿ.ವಿಭಾಗ: 1. ಗೌರಂಗ್ ಜೆಂಜಿ ಬೆಳಗಾಂ. 2. ಮನೋಜ್ ಬಿರ್ಜೆ ಬೆಳಗಾಂ, 3.ಪಂಕಂ ಕೆ. ಬೆಳಗಾಂ.

80 ಕೆ.ಜಿ.ವಿಭಾಗ: 1. ಸಿದ್ದು ದೇಶನೂರ್ ಬೆಳಗಾಂ.2. ಸಂದೀಪ್ ಕುಮಾರ್ ಎಸ್.ಶಿವಮೊಗ್ಗ 3. ವಿಜ್ ಬದ್ಬುದೆ ಬೆಂಗಳೂರು.

80+ ಕೆ.ಜಿ. ವಿಭಾಗ: ಲೆವಿನ್ ಸೋಮೇಶ್ವರ ದ.ಕ 2.ನಿತ್ಯಾನಂದ ಕೋಟ್ಯಾನ್ ಉಡುಪಿ 3. ಲಿಜೋ ಜೋನ್ ಬೆಂಗಳೂರು.

ಕುಸ್ತಿ ಸಿರಿ ಪುರುಷರ ವಿಭಾಗ

57 ಕೆ.ಜಿ.ತೂಕ: 1.ಶ್ರವಣ್ ಎನ್.ಸಾವಂತ ಧಾರವಾಡ 2. ಮಹೇಶ್ ಪಿ.ಗೌಡ ಧಾರವಾಡ 3. ಕೆಂಚಪ್ಪ ಎಸ್. ದಾವಣಗೆರೆ ಮತ್ತು ರವಿ ಆಳ್ವಾಸ್

61 ಕೆ.ಜಿ ತೂಕ: 1. ನಾಗರಾಜ ಎಂ. ಬೆಂಗಳೂರು (ಆಳ್ವಾಸ್ ಕುವರ) 2. ಸಚಿನ್ ಬಿ. ಅಂಬೂಜಿ ಧಾರವಾಡ 3. ಧರೇಪ್ಪಾ ಎ. ಪಾಟೀಲ ಧಾರವಾಡ ಮತ್ತು ಶಿವಾನಂದ ಎಸ್. ತಳವಾಡ ಬೆಳಗಾವಿ

65 ಕೆ.ಜಿ.ತೂಕ: 1.ಬಾಹುಬಲಿ ಮಾದಪ್ಪ ಶಿರಹಟ್ಟಿ ದಾವಣಗೆರೆ 2. ಮಹೇಶ ಗಂಗಾಧರ ಚಲವಾದಿ ಧಾರವಾಡ 3. ಅನಿಲ್ ಪಿ.ದಳವಾಯಿ ಧಾರವಾಡ ಮತ್ತು ಶಿವಾನಂದ ಸಿ.ಬಂಗಿ ಧಾರವಾಡ .

70 ಕೆ.ಜಿ ತೂಕ: 1. ರವಿ ಗೋಪಾಲಪ್ಪ ಕೆಂಪಣ್ಣವರ್ ಬೆಳಗಾವಿ, 2, ಸಂಜ್ ಈ ಶಿವಮೊಗ್ಗ 3. ಪಂಕಜ್ ಕುಮಾರ್ ಎಸ್. ದಾವಣಗೆರೆ ಮತ್ತು ವಿಕಾಸ್ ಎಸ್.ಕೆ. ದಾವಣಗೆರೆ

74 ಕೆ.ಜಿ.ತೂಕ: 1. ರಿಯಾಜ್ ಆರ್, ಮುಲ್ಲಾ ಎಸ್.ಟಿ.ಸಿ ಧಾರವಾಡ ( ಆಳ್ವಾಸ್ ನುಡಿಸಿರಿ ಕೇಸರಿ) 2. ಸುನಿಲ್ ಬಿ. ಪಡತರೆ ಧಾರವಾಡ 3, ಬಸವರಾಜ ಪಿ ತೇರದಾಳ ಆಳ್ವಾಸ್ ಹಾಗೂ ಸುನೀಲ್ ಕೆ.ಎಸ್. ದಾವಣಗೆರೆ

74+ಕೆ.ಜಿ.: 1.ಶಿವಾನಂದ ಎಂ. ಪೂಜಾರಿ ಬಾಗಲಕೋಟೆ, 2. ಸುನೀಲ್ ಹೊಸಕೋಟೆ ಧಾರವಾಡ 3. ಅಮಗೊಂಡ ಎಂ. ನಿರ್ವಾಣಿ ವಿಜಯಪುರ 3. ಸಾಜನ್ ಎಸ್.ಕರ್ಕೇರಾ

ದ.ಕ ಕುಸ್ತಿ ಸಿರಿ ಮಹಿಳೆಯರ ವಿಭಾಗ 

44 ಕೆ.ಜಿ.ತೂಕ: 1. ಮಮತಾ ಮಾರುತಿ ಕೇಳೊಜಿ ಆಳ್ವಾಸ್ 2.ಮೈತ್ರಾ ವ್ಯಾಪಾರಿ ಗದಗ್ 3. ವೈಷ್ಣವಿ ಆಳ್ವಾಸ್ ಮತ್ತು ಎವ್ರಿಲ್ ಡಿಸೋಜಾ ಎಸ್.ವಿ ಡಬ್ಲ್ಯು ಕಾರ್ಕಳ

48ಕೆ.ಜಿ ತೂಕ: 1. ಧನುಶ್ರೀ ಪಾಟೀಲ್ ಆಳ್ವಾಸ್ 2. ಶಶಿಕಲಾ ತಳವಾರ ಗದಗ 3. ಸೋನಿಯಾ ಜಾದವ್ ಗದಗ ಮತ್ತು ಲಾವಣ್ಯ ಎಸ್.ವಿ ಡಬ್ಲ್ಯು ಕಾರ್ಕಳ

53 ಕೆ.ಜಿ.ತೂಕ: 1, ಶಾಹಿದಾ ಬಳಿಗಾರ್ ಗದಗ 2. ಮಹಾಲಕ್ಷ್ಮೀ ಸಿದ್ಧಿ ಆಳ್ವಾಸ್ 3. ಹರ್ಷಿತಾ ಎಲ್ ಡಿ ಮತ್ತು ಅರ್ಪಣಾ ಸಿದ್ಧಿ ಆಳ್ವಾಸ್

58 ಕೆ.ಜಿ ತೂಕ: 1. ಆತ್ಮಶ್ರೀ ಎಚ್.ಎಸ್ (ಆಳ್ವಾಸ್‌ನುಡಿಸಿರಿ ಕುವರಿ) 2, ಲೀನಾ ಸಿದ್ಧಿ ಹಳಿಯಾಳ 3.ಕಾವ್ಯ ಎಚ್.ಡಿ ಆಳ್ವಾಸ್ ಮತ್ತು ಶ್ವೇತಾ ಎಸ್. ಬೆಳಗಟ್ಟಿ ಗದಗ

63 ಕೆ.ಜಿ.ತೂಕ: 1. ಲಕ್ಷ್ಮೀ ರೇಡೇಕರ್ 2. ಸಾವಕ್ಕ ತೇಗುರ್ಕರ್ 3. ಪವಿತ್ರಾ ದೇಸಾಯಿ ಮತ್ತು ಸಹನಾ ಪಿ.ಎಸ್. (ಆಳ್ವಾಸ್)

63+ಕೆ.ಜಿ.: 1 ಅನುಶ್ರೀ ಎಚ್.ಎಸ್. 2. ನಾಗರತ್ನ ಸಿದ್ಧಿ 3. ಪ್ರಿಯಾಂಕಾ ರೇವಣಕರ್ ಮತ್ತು ಸ್ವಾತಿ (ಆಳ್ವಾಸ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News