ವಾಹನ ಢಿಕ್ಕಿ: ಪಾದಚಾರಿ ಮೃತ್ಯು

Update: 2016-11-21 18:37 GMT

ಪಡುಬಿದ್ರೆ, ನ.21: ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ತೆಂಕ ಎರ್ಮಾಳು ಜಂಕ್ಷನ್‌ನಲ್ಲಿ ರವಿವಾರ ರಾತಿ ನಡೆದಿದೆ. ಮೃತರನ್ನು ತೆಂಕ ಎರ್ಮಾಳು ಪಡು ನಿವಾಸಿ ಕಿಶೋರ್ ಬಂಗೇರ(62) ಎಂದು ಗುರುತಿಸಲಾಗಿದೆ. ಮೀನುಗಾರಿಕಾ ಕೆಲಸ ನಿರ್ವಹಿಸುತ್ತಿದ್ದ ಇವರು ಸಂಜೆ ಎರ್ಮಾಳು ಜಂಕ್ಷನ್ ಕಣಜಾರಿಗೆ ಬಂದ ಸಂದರ್ಭ ಅಪರಿಚಿತ ವಾಹನ ಢಿಕ್ಕಿಯಾಗಿ ತೀವ್ರ ಗಾಯಗೊಂಡ ಅವರನ್ನು ಖಾಸಗಿ ಆ್ಯಂಬುಲೆನ್ಸ್ ಮೂಲಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಪ್ರತ್ಯಕ್ಷದರ್ಶಿಗಳು ಹೇಳುವಂತೆ ಅಪಘಾತ ನಡೆಸಿದ್ದು, ಮಂಗಳೂರು ಕಡೆಗೆ ಅತೀ ವೇಗವಾಗಿ ಹೋಗುತ್ತಿದ್ದ ಕಾರು ಎನ್ನುತ್ತಾರಾದರೂ, ಕೆಲವರು ಮೀನಿನ ವಾಹನ ಎನ್ನುತ್ತಾರೆ. ತಕ್ಷಣ ಪಡುಬಿದ್ರೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ತಡರಾತ್ರಿಯವರೆಗೆ ಅಪಘಾತ ನಡೆಸಿದ ವಾಹನ ಪತ್ತೆಯಾಗಿಲ್ಲ.

 ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News