ಮನೆಯಿಂದ ಚಿನ್ನಾಭರಣ ಕಳವು

Update: 2016-11-21 18:38 GMT

ಮಂಗಳೂರು, ನ.21: ನಗರದ ಕದ್ರಿ ಕಂಬಳದ ಎಸ್.ಆರ್. ಶೆಟ್ಟಿ ಎಂಬವರ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ, ಮೊಬೈಲ್ ಫೋನ್, ವಾಚ್ ಮತ್ತಿತರ ಸಾಮಗ್ರಿಗಳನ್ನು ಕಳವುಗೈದ ಘಟನೆ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಕಿಗೆ ಬಂದಿದೆ.

ಕಳ್ಳರು ಮನೆಯ ಕಪಾಟಿನೊಳಗಿಟ್ಟಿದ 4 ಪವನು ತೂಕದ ಮುತ್ತಿನ ಪೆಂಡೆಂಟ್, 3 ಪವನ್ ತೂಕದ 1 ಸರ, ಮೊಬೈಲ್ ಫೋನ್, ವಾಚ್ ಕಳವುಗೈದಿದ್ದಾರೆ ಎನ್ನಲಾಗಿದೆ. ಇವುಗಳ ವೌಲ್ಯ 3.70 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಎಸ್.ಆರ್.ಶೆಟ್ಟಿ ಮನೆಯ ನವೀಕರಣ ಕಾಮಗಾರಿ ನಡೆಸುತ್ತಿದ್ದಾರೆ. ಹಾಗಾಗಿ ಅವರು ಅರ್ಕುಳದಲ್ಲಿರುವ ತನ್ನ ಫಾರ್ಮ್‌ಹೌಸ್‌ನಲ್ಲಿ ನೆಲೆಸಿದ್ದು, ವಾರದಲ್ಲಿ ಎರಡು ಬಾರಿ ನವೀಕರಣಗೊಳ್ಳುತ್ತಿರುವ ಮನೆಗೆ ಬಂದು ಹೋಗುತ್ತಿದ್ದರು ಎನ್ನಲಾಗಿದೆ. ಸೋಮವಾರ ಈ ಮನೆಗೆ ಬಂದಾಗ ಹಿಂಬಾಗಿಲು ಮುರಿದುದು ಕಂಡು ಬಂದಿದ್ದು, ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News