ಹಿರಿಯರೆಡೆಗೆ ಸಾಹಿತ್ಯದ ನಡಿಗೆ: ಶಿವರಾಮ ಭಟ್ಗೆ ಸನ್ಮಾನ
Update: 2016-11-27 11:59 GMT
ಹೆಬ್ರಿ, ನ.27: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಜೆಕಾರು ಹೋಬಳಿ ಘಟಕದ ವತಿಯಿಂದ ಅಜೆಕಾರು ವೃಂದಾವನದಲ್ಲಿ ಶುಕ್ರವಾರ ನಡೆದ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ತೀರ್ಥಹಳ್ಳಿ ಮೂಲದ ಅಜೆಕಾರು ಕೆ.ವಿ.ಶಿವರಾಮ ಭಟ್ ಗೌರವ ಸನ್ಮಾನ ಮಾಡಲಾಯಿತು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಜೆಕಾರು ಹೋಬಳಿ ಘಟಕದ ಗೌರವ ಸಲಹೆಗಾರ ಸಂತೋಷ್ ಕುಮಾರ್ ಶೆಟ್ಟಿ ಸನ್ಮಾನ ನೆರವೇರಿಸಿದರು. ಅಧ್ಯಕ್ಷತೆಯನ್ನು ಕಸಾಪ ಅಜೆಕಾರು ಹೋಬಳಿ ಘಟಕದ ಅಧ್ಯಕ್ಷ ಶೇಖರ ಅಜೆಕಾರ ವಹಿಸಿದ್ದರು.
ಶಿವರಾಮ್ ಭಟ್ ಪತ್ನಿ ವಸಂತಿ ಭಟ್, ಪುತ್ರ ಭರತ್ ಭಟ್, ಪತ್ರಕರ್ತ ರಾಮ್ ಅಜೆಕಾರು, ಘಟಕದ ಪ್ರಧಾನ ಕಾರ್ಯದರ್ಶಿ ಸುಕುಮಾರ್ ಮುನಿಯಾಲ್, ಕಾರ್ಯದರ್ಶಿ ಕಬ್ಬಿನಾಲೆ ಶ್ರೀಕರ ಭಾರಧ್ವಾಜ್, ಅಜೆಕಾರು ಯುವರಾಜ ಅತಿಕಾರಿ ಮೊದಲಾದವರು ಉಪಸ್ಥಿತರಿದ್ದರು.