ರೋಗಶಯ್ಯೆಯಲ್ಲಿದ್ದ ನಕ್ಸಲ್‌ನಾಯಕರನ್ನು ಪೊಲೀಸರು ಕೊಂದಿದ್ದಾರೆ: ಮಾವೊವಾದಿ ನಾಯಕನ ಹೇಳಿಕೆ

Update: 2016-11-28 11:05 GMT

ಮಲಪ್ಪುರಂ, ನವೆಂಬರ್ 28: ರೋಗಪೀಡಿತರಾಗಿ ವಿಷಮ ಸ್ಥಿತಿಯಲ್ಲಿದ್ದ ಮಾವೋವಾದಿಗಳನ್ನು ಪೊಲೀಸರು ಗುಂಡಿಟ್ಟು ಕೊಂದರೆಂದು ಮಾವೊವಾದಿ ನಾಯಕನೊಬ್ಬ ಬಹಿರಂಗಪಡಿಸಿದ್ದಾನೆಂದು ವರದಿಯಾಗಿದೆ. ಇಬ್ಬರನ್ನು ಕೊಲ್ಲುವುದರಿಂದ ನಮ್ಮ ಚಟುವಟಿಕೆಗಳನ್ನು ತಡೆಯಲು ಸಾಧ್ಯವಿಲ್ಲ.

ಹೊಸನಾಯಕ ಕೂಡಲೇ ಎದ್ದು ಬರಲಿದ್ದಾನೆಂದು ಕೇರಳ ಪೊಲೀಸರ ಕಾರ್ಯಾಚರಣೆ ಸಮಯದಲ್ಲಿ ನಿಲಂಬೂರ್ ಕಾಡು ಪ್ರದೇಶದ ಕ್ಯಾಂಪ್‌ನಲ್ಲಿ ಇದ್ದ ಮಾವೊವಾದಿ ನಾಯಕ ಪೋನ್ ಮೂಲಕ ಪತ್ರಿಕೆಯೊಂದಕ್ಕೆ ಹೇಳಿದ್ದಾನೆ. ಇತ್ತೀಚೆಗೆ ಕೇರಳ ಪೊಲೀಸರು ನಿಲಂಬೂರ್ ಅರಣ್ಯ ಪ್ರದೇಶದಲ್ಲಿ ಎನ್‌ಕೌಂಟರ್ ನಡೆಸಿ ಇಬ್ಬರು ಮಾವೋವಾದಿಗಳನ್ನು ಹತ್ಯೆ ಮಾಡಿದ್ದರು. ವಿವಿಧ ರೋಗಗಳಿಂದ ಬಳಲುತ್ತಿದ್ದ ಅಜಿತ ಮತ್ತು ಕುಪ್ಪು ದೇವರಾಜ್‌ಗೆ ಓಡಿಹೋಗಲು ಸಾಧ್ಯವಾಗಿಲ್ಲ.

ಕೇಂದ್ರ ಸಮಿತಿಯ ಸದಸ್ಯರಾದ ಕುಪ್ಪುಸ್ವಾಮಿ ಮತ್ತು ಪಶ್ಚಿಮಘಟ್ಟದ ವಿಶೇಷ ವಲಯ ಸಮಿತಿ ಸದಸ್ಯ ಅಜಿತಾ ಚಿಕಿತ್ಸೆ ಪಡೆಯುತ್ತಿದ್ದರು. ಕುಪ್ಪುಸ್ವಾಮಿಗೆ ಪ್ರೆಶರ್ ಮತ್ತು ಸಿಹಿಮೂತ್ರ ರೋಗವಿತ್ತು. ಒಂದು ಅವಘಡದಲ್ಲಿ ಪಾರಾಗಿದ್ದ ಅಜಿತಾಗೆ ಶಸ್ತ್ರಕ್ರಿಯೆ ನಡೆಸಲಾಗಿತ್ತು. ಪೊಲೀಸ್ ದಾಳಿ ವೇಳೆ ಕ್ಯಾಂಪ್‌ನಲ್ಲಿ ಯಾರೆಲ್ಲ ಇದ್ದರೆಂದು ಬಹಿರಂಗಪಡಿಸುವುದಿಲ್ಲ ಎಂದು ಮಾವೊವಾದಿ ನಾಯಕ ಪತ್ರಿಕೆಗೆ ಫೋನ್ ಕರೆ ಮಾಡಿ ತಿಳಿಸಿದ್ದಾನೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News