ಜಾತಿ ನಿಂದನೆ: ಐವರ ಮೇಲೆ ಪ್ರಕರಣ ದಾಖಲು

Update: 2016-11-29 10:36 GMT

ಮುಂಡಗೋಡ, ನ.29: ವ್ಯಕ್ತಿಯೊಬ್ಬರಿಗೆ ಜಾತಿ ನಿಂದನೆ ಮಾಡಿದ ವಿಚಾರಕ್ಕೆ ಸಂಬಂಧಿಸಿ ಐವರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.

ತೊಗರಳ್ಳಿ ಗ್ರಾಮದ ಹಾಲಿನ ಡೈರಿಯೊಂದರ ನೌಕರರಾಗಿರುವ ಈರಪ್ಪಹನಮಂತಪ್ಪಭೊವಿವಡ್ಡರ ಅವರಿಗೆ ಸತೀಶ ನಾಯಕ ಎಂಬಾತ ಹಲ್ಲೆಗೈದು ಅವಾಚ್ಯವಾಗಿ ಬೈಯ್ದದಲ್ಲದೆ, ಜಾತಿ ನಿಂದನೆ ಮಾಡಿದ್ದಾನೆ. ಈತನ ಜೊತೆ ರಾಮಚಂದ್ರ ಯಾದವ ದಾಸರ, ಪ್ರಸನ್ನ ತಿರಮಲೇಶ್ವರ ಹೆಗಡೆ, ನಾಗರಾಜ ರಾಮ ನಾಯ್ಕ ಹಾಗೂ ರಾಮಾ ಕನ್ನಾ ನಾಯಕ ಎಂಬವರು ಸೇರಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಈರಪ್ಪ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News