ಅಪರಿಚಿತ ವಾಹನ ಢಿಕ್ಕಿ: ಸವಾರ ಮೃತ್ಯು
Update: 2016-11-29 22:21 IST
ಕೋಟ, ನ.29: ಐರೋಡಿ ಗ್ರಾಮದ ಮಾಬುಕಳ ಸೇತುವೆಯ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಗಿನ ಜಾವ 4:30ರ ಸುಮಾರಿಗೆ ಅಪರಿಚಿತ ವಾಹನವೊಂದು ಆ್ಯಕ್ಟಿವ್ ಹೊಂಡಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಕುಂದಾಪುರ ಕೋಡಿ ನಿವಾಸಿ ಕುಷ್ಟ ಮೊಗವೀರ ಎಂಬವರ ಮಗ ಚಂದ್ರ ಮೊಗವೀರ(45) ಎಂದು ಗುರುತಿಸಲಾಗಿದೆ. ಇವರು ಮೀನು ಗಾರಿಕೆ ಕೆಲಸಕ್ಕೆ ಮನೆಯಿಂದ ಮಲ್ಪೆಗೆ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿ ರುವಾಗ ಹಿಂದಿನಿಂದ ಬಂದ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಪರಾರಿಯಾಯಿತು. ಅಪಘಾತದಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯ ಗೊಂಡ ಚಂದ್ರ ಸ್ಥಳದಲ್ಲೇ ಮೃತಪಟ್ಟರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.