ಎಸ್ಸೆಸ್ಸೆಫ್ ಪ್ರತಿನಿಧಿ ಸಮ್ಮಿಲನ -ಅಸ್ಸುಫ ಉದ್ಘಾಟನೆ

Update: 2016-11-30 14:35 GMT

ಉಡುಪಿ, ನ.30: ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ವತಿಯಿಂದ ಶಾಖಾ ಸದಸ್ಯರ ಪ್ರತಿನಿಧಿ ಸಮ್ಮಿಲನ ಹಾಗೂ ಅಸ್ಸುಫ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ದೊಡ್ಡಣಗುಡ್ಡೆ ರಹ್ಮಾನಿಯಾ ಜುಮ್ಮಾ ಮಸೀದಿಯಲ್ಲಿ ಜರಗಿತು.

ಅಸ್ಸಯ್ಯದ್ ಜಅ್ಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ದುಆದೊಂದಿಗೆ ಅಸ್ಸುಫ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಡಿವಿಷನ್ ಅಧ್ಯಕ್ಷ ಬಿ.ಎ.ಮುಹಮ್ಮದಾಲಿ ಸಅದಿ ವಹಿಸಿದ್ದರು. ಸ್ಥಳೀಯ ಮಸೀದಿ ಖತೀಬ್ ಅಬೂಬಕರ್ ಸಖಾಫಿ ದೊಡ್ಡಣಗುಡ್ಡೆ ಮಾತನಾಡಿದರು.

 ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಅಶ್ರಫ್ ರಝಾ ಅಂಜದಿ, ರಾಜ್ಯ ಸಮಿತಿ ಉಪಾ ಧ್ಯಕ್ಷ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಅವರಿಗೆ ಏಸ್ ಟೀಮ್ ಉಡುಪಿ ಇದರ ವತಿಯಿಂದ ‘ಮರ್‌ಹೂಂ ಸಫ್‌ವಾನ್ ರಂಗನಕೆರೆ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ನ್ಯಾಯವಾದಿ ಹಂಝತ್ ಹೆಜಮಾಡಿ, ಕಟಪಾಡಿ ಸೆಕ್ಟರ್ ಅಧ್ಯಕ್ಷ ರಶೀದ್ ಮುಸ್ಲಿಯಾರ್, ಮಣಿಪಾಲ ಸೆಕ್ಟರ್ ಅಧ್ಯಕ್ಷ ಹನೀಫ್ ಮದನಿ ಅಂಬಾಗಿಲು, ಡಿವಿಷನ್ ಕೋಶಾಧಿಕಾರಿ ಸಿದ್ದೀಕ್, ನೇಜಾರ್ ಖತೀಬ್ ಉಸ್ಮಾನ್ ಮದನಿ, ಸಮದ್ ಉಸ್ತಾದ್ ಸಾಸ್ತಾನ, ಆಶಿಂ, ಶಂಶುದ್ದೀನ್ ಆರ್.ಕೆ., ರಝಾಕ್ ಉಸ್ತಾದ್, ಕಯ್ಯುಮ್, ನಿಸಾರ್ ಸಖಾಫಿ, ಅಬ್ದುರ್ರಹ್ಮಾನ್ ಕಾಶಿಪಟ್ಣ, ಇಬ್ರಾಹೀಂ ಮಜೂರು ಉಪಸ್ಥಿತರಿದ್ದರು.

ಡಿವಿಷನ್ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಸಅದಿ ಸ್ವಾಗತಿಸಿದರು. ಕ್ಯಾಂಪಸ್ ಕಾರ್ಯದರ್ಶಿ ನವಾಝ್ ಹೂಡೆ ವಂದಿಸಿದರು. ಕಾರ್ಯದರ್ಶಿ ನಾಸೀರ್ ಭದ್ರಗಿರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News