ಧ್ರುವನಿಗೆ ನೋಟು ನಿಷೇಧದ ಬಿಸಿ

Update: 2016-12-02 15:43 GMT

ಟಾಲಿವುಡ್‌ನಲ್ಲಿ ಭಾರೀ ಕುತೂಹಲ ಸೃಷ್ಟಿಸಿರುವ ‘ಧ್ರುವ’ ಚಿತ್ರಕ್ಕೆ ಕರೆನ್ಸಿ ಬ್ಯಾನ್‌ನ ಬಿಸಿ ತಟ್ಟಿದೆ. 1 ಸಾವಿರ ಹಾಗೂ 500 ರೂ. ನೋಟು ನಿಷೇಧದ ಬಳಿಕ ಚಿಲ್ಲರೆ ಅಭಾವ ದಿಂದ ಪರದಾಡುತ್ತಿರುವ ಜನಸಾಮಾನ್ಯರು ಸದ್ಯದ ಪರಿಸ್ಥಿತಿಯಲ್ಲಿ ಥಿಯೇಟರ್‌ಗಳ ಕಡೆಗೆ ಹೆಜ್ಜೆಹಾಕಲೂ ಹಿಂಜರಿಯುತ್ತಿದ್ದಾರೆ. ಇದನ್ನು ಮನಗಂಡಿರುವ ನಿರ್ಮಾಪಕ ಅಲ್ಲು ಅರವಿಂದ್, ‘ಧ್ರುವ’ ಚಿತ್ರುದ ಬಿಡುಗಡೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿದ್ದಾರೆ.

ಚಿರಂಜೀವಿ ಪುತ್ರ ತೇಜ ನಾಯಕನಾಗಿ ನಟಿಸಿರುವ ‘ಧ್ರುವ’ ಚಿತ್ರವನ್ನು ಮೊದಲಿಗೆ ಡಿಸೆಂಬರ್ 2ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ನೋಟು ನಿಷೇಧದ ಪರಿಣಾಮವಾಗಿ ಪ್ರೇಕ್ಷಕರು ಚಿತ್ರ ವೀಕ್ಷಣೆಗೆ ಆಗಮಿಸುವುದು ಅನುಮಾನವಾಗಿದೆ. ಹೀಗಾಗಿ ಸಾಕಷ್ಟು ಚಿಂತನ ಮಂಥನಗಳನ್ನು ನಡೆಸಿದ ಬಳಿಕ ಡಿಸೆಂಬರ್ 9ಕ್ಕೆ ಚಿತ್ರವನ್ನು ಬಿಡುಗಡೆಗೊಳಿಸಲು ನಿರ್ಧರಿಸಿರುವುದಾಗಿ ಅರವಿಂದ್ ಹೇಳಿಕೊಂಡಿದ್ದಾರೆ.

ರಾಕುಲ್ ಪ್ರೀತ್ ಸಿಂಗ್ ನಾಯಕಿಯಾಗಿರುವ ಈ ಚಿತ್ರದಲ್ಲಿ ತಮಿಳು ನಟ ಅರವಿಂದ್ ಸ್ವಾಮಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಸುರೇಂದರ್ ರೆಡ್ಡಿ ನಿರ್ದೇಶನದ ಈ ಚಿತ್ರವು ತಮಿಳಿನ ಸೂಪರ್‌ಹಿಟ್ ಚಿತ್ರ ‘ತನಿ ಒರುವನ್’ನ ರಿಮೇಕ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News