ಉಚ್ಚಿಲಗುಡ್ಡೆ: ಆಹಾರೋತ್ಸವ, ವಸ್ತು ಪ್ರದರ್ಶನ ಕಾರ್ಯಕ್ರಮ

Update: 2016-12-03 11:01 GMT

ಉಳ್ಳಾಲ, ಡಿ.3: ಉಚ್ಚಿಲಗುಡ್ಡೆಯ ರಹ್ಮಾನಿಯಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಆಹಾರೋತ್ಸವ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಿತು.

ಶಾಲಾ ವಿದ್ಯಾರ್ಥಿಗಳ ಕೈಯಿಂದ ತಯಾರಿಸಲ್ಪಟ್ಟ ವಸ್ತು ಪ್ರದರ್ಶನವು ಮತ್ತು ಆಹಾರೋತ್ಸವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

 ಉಚ್ಚಿಲಗುಡ್ಡೆ ಹಯಾತುಲ್ ಇಸ್ಲಾಮ್ ಮದ್ರಸದ ಮುಖ್ಯೋಪಾಧ್ಯಾಯ ಜಲಾಲುದ್ದೀನ್ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಹನೀಫ್ ಎಸ್.ಬಿ., ಶಾಲಾ ಸಂಚಾಲಕ ಅಬ್ದುಸ್ಸಲಾಮ್ ಜಿ.ಐ., ಉಪಾಧ್ಯಕ್ಷ ಅಬ್ದುಸ್ಸಲಾಮ್ ಯು., ಜೊತೆ ಕಾರ್ದರ್ಶಿ ಆದಮ್ ಕುಂಞಿ ಯು.ಕೆ., ಅಕ್ಬರ್ ಅಲಿ ಮುಸ್ಲಿಯಾರ್, ಮುಹಮ್ಮದ್ ಜಿ.ಐ. ಉಪಸ್ಥಿತರಿದ್ದರು.

ರಹ್ಮಾನಿಯಾ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯಿನಿ ಜಯಶ್ರೀ ಎಸ್. ಸ್ವಾಗತಿಸಿ, ವಂದಿಸಿದರು. ಶಾಲಾ ನಾಯಕ ಮುಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News