ಉಡುಪಿಯಲ್ಲಿ ಕಾರ್ಮಿಕನ ಕೊಲೆ

Update: 2016-12-03 13:17 GMT

ಉಡುಪಿ, ಡಿ.3 : ಪಶ್ಚಿಮಬಂಗಾಳದ ಕಾರ್ಮಿಕನೋರ್ವನನ್ನು ಆತನ ಸ್ನೇಹಿತನೆ ಕೊಲೆ ಮಾಡಿರುವ ಘಟನೆ ಪುತ್ತೂರು ಗ್ರಾಮದ ವಸುಂಧರಾನಗರದಲ್ಲಿ ನಡೆದಿದೆ.

ಕೊಲೆಯಾದವನನ್ನು ನಿರೇನ್ ರಾಯ್ ಬಿರ್ ಎಂದು ಗುರುತಿಸಲಾಗಿದೆ.

ವಸುಂಧರಾನಗರ ಖಾಸಗಿ ಆಸ್ಪತ್ರೆಯೊಂದರ  ಕಟ್ಟಡದ ಕಾಮಗಾರಿ ನಡೆಯುವ ಸ್ಥಳದ ಶೆಡ್‌ನಲ್ಲಿ ವಾಸವ್ಯವಿದ್ದ ಪಶ್ಚಿಮಬಂಗಾಳ ವಾಸಿ ನಿರೇನ್ ರಾಯ್ ಬಿರ್ ಹಾಗೂ ಬಿಸ್ವಜಿತ್ ರಾಯ್ ನಡುವೆ ಅಂಗಡಿಯಿಂದ ಅಡುಗೆ ಸಾಮಾನು ತರುವ ವಿಚಾರವಾಗಿ ಮಾತುಕತೆಯಾಗಿತ್ತು.  ಕೋಪಗೊಂಡ ಬಿಸ್ವಜಿತ್ ರಾಯ್ ನಿರೇನ್ ರಾಯ್ ಬಿರ್ ಎಂಬುವವನಿಗೆ ಚೂರಿಯಿಂದ ಎದೆಗೆ ತಿವಿದು ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ  ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News