ಕಾರು ಢಿಕ್ಕಿ ಹೊಡೆದು ಬಾಲಕಿ ಸಾವು

Update: 2016-12-03 17:18 GMT

ಬೆಳ್ತಂಗಡಿ, ಡಿ.3 :  ತಾಯಿಯೊಂದಿಗೆ ರಸ್ತೆ ದಾಟುತ್ತಿದ್ದ ಬಾಲಕಿಗೆ ಕಾರು ಢಿಕ್ಕಿಹೊಡೆದು ಮೃತ ಪಟ್ಟ ಘಟನೆ ಕೊಕ್ಕಡದಲ್ಲಿ ಶನಿವಾರ ಸಂಜೆ ಸಂಭವಿಸಿದೆ.

 ಮೃತ ಬಾಲಕಿ ಪಟ್ಲಡ್ಕ ನಿವಾಸಿ ಶಿವಪ್ಪ ಎಂಬವರ ಮಗಳು ಕೃತಿಕ (5) ಎಂಬಾಕೆಯಾಗಿದ್ದಾಳೆ.

ಸಂಜೆ ಏಳುಗಂಟೆಯ ಸುಮಾರಿಗೆ ತಾಯಿಯೊಂದಿಗೆ ಕೊಕ್ಕಡ ಪೇಟೆಯ ವೈದ್ಯರಲ್ಲಿಗೆ ಬಂದಿದ್ದ ಬಾಲಕಿ ಅಲ್ಲಿಂದ ಹಿಂತಿರುಗುತ್ತಿದ್ದ ವೇಳೆ  ಕೊಕ್ಕಡದ ಎಂಡೋ ಪಾಲನ ಕೇಂದ್ರದ ಮಾರುತಿ ಓಮ್ನಿ ಕಾರು ಡಿಕ್ಕಿ ಹೊಡೆದಿದೆ. ಕೂಡಲೆ ಸ್ಥಳೀಯರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ,ಆಕೆ ಮೃತಪಟ್ಟಿದ್ದಳು.

ಕಾರನ್ನು ಚಲಾಯಿಸುತ್ತಿದ್ದ ನಾರಾಯಣ ಎಂಬಾತ ಪಾನಮತ್ತನಾಗಿ ವಾಹನವನ್ನು ಚಲಾಯಿಸುತ್ತಿದ್ದ ಎಂದು ಆರೋಪಿಸಿ ಸ್ಥಳೀಯ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ಸಂಸ್ಥೆಯ ವಾಹನ ಇದಾಗಿದ್ದು , ಕರ್ತವ್ಯದ ಬಳಿಕ ಚಾಲಕ ತನ್ನ ಅಗತ್ಯಕ್ಕೆ ಕಾರು ಉಪಯೋಗಿಸುತ್ತಿದ್ದ ಇದು ಬಾಲಕಿಯ ಜೀವ ತೆಗೆದುಕೊಂಡಿದೆ. ಧರ್ಮಸ್ಥಳ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News