×
Ad

ಕಾಸರಗೋಡು: ಪೀಠೋಪಕರಣ ತಯಾರಿ ಘಟಕಕ್ಕೆ ಬೆಂಕಿ ತಗಲಿ ಲಕ್ಷಾಂತರ ರೂ. ನಷ್ಟ

Update: 2016-12-04 19:59 IST

 ಕಾಸರಗೋಡು, ಡಿ.4:   ಪೀಠೋಪಕರಣ ತಯಾರಿ ಘಟಕಕ್ಕೆ ಬೆಂಕಿ ತಗಲಿ ಲಕ್ಷಾಂತರ ರೂ.  ನಷ್ಟ ಉಂಟಾದ ಘಟನೆ  ವಿದ್ಯಾನಗರದಲ್ಲಿ ಬೆಳಿಗ್ಗೆ ನಡೆದಿದೆ.

ಚೆಟ್ಟ೦ಗುಯಿಯಲ್ಲಿರುವ  ಘಟಕಕ್ಕೆ ಬೆಂಕಿ ತಗಲಿದ್ದು,  ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಘಟಕಗಳ ಸಿಬ್ಬಂದಿಗಳು ಬೆಂಕಿಯನ್ನು  ನಂದಿಸಿ , ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದರು.

ಬೆಂಕಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ  ನೀಡಿದ್ದಾರೆ.

ಘಟಕದಲ್ಲಿದ್ದ ಹಲವು ತರದ ಪೀಠೋಪಕರಣಗಳು, ಮರಮಟ್ಟು ಸುಟ್ಟು ಭಸ್ಮವಾಗಿದ್ದು,  ಶಾರ್ಟ್ ಸರ್ಕ್ಯೂಟ್ ಘಟನೆಗೆ ಕಾರಣ ಎನ್ನಲಾಗಿದೆ.

ಎಂ . ಸಲೀಂ ಎಂಬವರ ಮಾಲಕತ್ವದಲ್ಲಿರುವ ಈ ಘಟಕ ಚೆಟ್ಟ೦ಗುಯಿ  ಹಿದಾಯತ್ ನಗರದಲ್ಲಿ ಕಾರ್ಯಾಚರಿಸುತ್ತಿದೆ.

 ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ  ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News