ಐವರು ಸಾಧಕರಿಗೆ ‘ರಚನಾ ಪ್ರಶಸ್ತಿ ಪ್ರದಾನ
ಮಂಗಳೂರು, ಡಿ. 4: ರಚನಾ ಕೆಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ ಇಂದು ಸಂಜೆ ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಐವರಿಗೆ ‘ರಚನಾ ಅವಾರ್ಡ್’ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಬಿಷಪ್ ಅತಿ ವಂ. ಡಾ.ಅಲೋಶಿಯಸ್ ಪೌಲ್ ಡಿಸೋಜಾ ವಹಿಸಿದ್ದರು.
ಶಾಸಕ ಜೆ.ಆರ್.ಲೋಬೊ, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ರಚನಾದ ಅಧ್ಯಕ್ಷ ಗಿಲ್ಬರ್ಟ್ ಡಿಸೋಜಾ, ಸಂಚಾಲಕ ಡಾ.ನೊರ್ಮನ್ ಮೆಂಡೊನ್ಸಾ, ಕಾರ್ಯದರ್ಶಿ ಯುಲಲಿಯಾ ಡಿಸೋಜಾ ಉಪಸ್ಥಿತರಿದ್ದರು.
ಸನ್ಮಾನಿಸಲ್ಪಟ್ಟ ಐವರು ಸಾಧಕರು
‘ರಚನಾ ವರ್ಷದ ಮಹಿಳೆ’ ಪ್ರಶಸ್ತಿಯನ್ನು ಮಂಗಳೂರಿನ ವೈಟ್ ಡೋವ್ಸ್ ಆ್ಯಂಡ್ ಲೈಫ್ ಸೋಶಿಯಲ್ ಆ್ಯಕ್ಟಿವಿಟಿಯ ಸ್ಥಾಪಕಿ ಕೊರೆನಾ ರಸ್ಕಿನಾ, ಕೃಷಿ ಕ್ಷೇತ್ರದಲ್ಲಿನ ಸಾಧನೆಗೆ ಕೊಕ್ಕಡದ ಪ್ರಗತಿಪರ ಕೃಷಿಕ ವಿನ್ಸೆಂಟ್ ಡಿಸೋಜಾ, ಉದ್ಯಮ ಕ್ಷೇತ್ರದಲ್ಲಿನ ಸಾಧನೆಗೆ ಪುಣೆಯ ರೊಸಾರಿ ಎಜುಕೇಶನಲ್ ಗ್ರೂಪ್ನ ವಿವೇಕ್ ಅರನ್ಹಾ, ವೃತ್ತಿಪರ ವಿಭಾಗದಲ್ಲಿ ಬ್ಯಾಂಕ್ ಆ್ ಮಹಾರಾಷ್ಟ್ರದ ಮಾಜಿ ಸಿಎಂಡಿ ಅಲೆನ್ ಸಿ.ಎ. ಪಿರೇರಾ ಹಾಗೂ ಎನ್ಆರ್ಐ ಉದ್ಯಮಿ ಪ್ರಶಸ್ತಿಯನ್ನು ಮಾರ್ಟಿನ್ ಜೆ. ಅರಾನ್ಹಾ ಅವರಿಗೆ ಪ್ರದಾನ ಮಾಡಲಾಯಿತು.
ಬಿಷಪ್ ಅತಿ ವಂ. ಡಾ. ಅಲೋಶಿಯಸ್ ಪೌಲ್ ಡಿಸೋಜಾ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.