ಕೆಎಸ್ಸಾರ್ಟಿಸಿ ಬಸ್,ಕಾರು ಢಿಕ್ಕಿ: ಇಬ್ಬರ ಮೃತ್ಯು

Update: 2016-12-05 05:41 GMT

ಕೋಟ್ಟಯಂ, ಡಿ. 5: ತಲಯೋಲಪ್ಪರಂಬ್ ವೆಟ್ಟಿಕ್ಕಾಟ್ ಮುಕ್ಕಿಲ್ ಎಂಬಲ್ಲಿ ಕೇರಳರಾಜ್ಯ ಸಾರಿಗೆ ಬಸ್ ಮತ್ತು ಕಾರು ಢಿಕ್ಕಿಯಾದ ಪರಿಣಾಮ ಇಬ್ಬರು ಮೃತರಾದ ಘಟನೆ ವರದಿಯಾಗಿದೆ. ಮೂವರ ಸ್ಥಿತಿ ಗಂಭೀರವಾಗಿದೆ.

ಸೋಮವಾರ ಬೆಳಗ್ಗೆ 7:30ರ ವೇಳೆಗೆ ಅಪಘಾತಸಂಭವಿಸಿದ್ದು, ಮಲಪ್ಪುರಂ ಎಆರ್ ಕ್ಯಾಂಪ್‌ನ ಪೊಲೀಸ್ ಸಿಬ್ಬಂದಿಗಳಾದ ಸಲಾಹುದ್ದೀನ್(30), ಮತ್ತು ಕೋಟ್ಟಯಂ ನಿಯೂರ್ ಎಂಬಲ್ಲಿನ ಇನ್ನೊಬ್ಬ ವ್ಯಕ್ತಿ( ವ್ಯಕ್ತಿಯನ್ನು ಗುರುತಿಸಲಾಗಿಲ್ಲ) ಮೃತರಾಗಿದ್ದಾರೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ರೇಂಜ್ ಆಫೀಸರ್ ಅಬ್ದುಲ್ ರಝಾಕ್(49,ಮೃತ ಸಲಾಹುದ್ದೀನ್‌ರ ತಂದೆ), ಅವರ ಪತ್ನಿ ಶಾಹಿದಾ (48), ಸಂಬಂಧಿಕನಾದ ಮುಹಮ್ಮದ್ ಕಾಸಿಂ(21) ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಮಾತ್ರವಲ್ಲ ಗಾಯಾಳುಗಳ ರಕ್ಷಣಾ ಕಾರ್ಯದಲ್ಲಿ ನಿರತನಾಗಿದ್ದ ಸಂದರ್ಭದಲ್ಲಿ ತಲೆಯೋಲಪ್ಪರಂಬ್ ವೆಟ್ಟಿಕ್ಕಾಟ್ ಅಬ್ದುಲ್‌ಅಝೀರ್(53) ಎಂಬವರಿಗೆ ಕೈಗೆ ಗಾಯವಾಗಿದೆ.  ಗಾಯಾಳುಗಳನ್ನು ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ. ಮಲಪ್ಪುರಂನಿಂದ ಅಬ್ದುಲ್‌ರಝಾಕ್‌ರ ವರ್ಗಾವಣೆಗೆ ಸಂಬಂಧಿಸಿ ತಿರುವನಂತಪುರಂಗೆ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಮತ್ತು ಕೆಸ್ಸಾರ್ಟಿಸಿ ಬಸ್ ಢಿಕ್ಕಿಯಾಗಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News