ಕಟೀಲು ದೇವಳಕ್ಕೆ ಜನಾರ್ದನ ರೆಡ್ಡಿ ರಹಸ್ಯ ಭೇಟಿ

Update: 2016-12-06 06:02 GMT

ಮಂಗಳೂರು, ಡಿ.6: ಇತ್ತೀಚೆಗೆ ಕೋಟ್ಯಂತರ ರೂ. ವೆಚ್ಚದಲ್ಲಿ ಅದ್ದೂರಿಯಾಗಿ ಮಗಳ ವಿವಾಹ ನೆರವೇರಿಸಿ ಸುದ್ದಿಯಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಕಟೀಲು ದೇವಳಕ್ಕೆ ರಹಸ್ಯವಾಗಿ ಭೇಟಿ ನೀಡಿರುವುದು ವರದಿಯಾಗಿದೆ.
ಜನಾರ್ದನ ರೆಡ್ಡಿ ನಿನ್ನೆ ತಡರಾತ್ರಿ ರಹಸ್ಯವಾಗಿ ಕಟೀಲು ಕ್ಷೇತ್ರಕ್ಕೆ ಕುಟುಂಬ ಸಮೇತ ಆಗಮಿಸಿದ್ದು, ಸ್ಥಳೀಯ ವಸತಿ ಗೃಹವೊಂದರಲ್ಲಿ ವಾಸ್ತವ್ಯವಿದ್ದರು. ಇಂದು ಅವರು ಕುಟುಂಬದೊಂದಿಗೆ ಕಟೀಲು ಕ್ಷೇತ್ರದಲ್ಲಿ ಚಂಡಿಕಾ ಯಾಗ ನಡೆಸಲಿಸಲಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News