ಗುತ್ತಿಗೆದಾರನ ಆತ್ಮಹತ್ಯೆ
Update: 2016-12-07 12:13 GMT
ಮಂಗಳೂರು, ಡಿ. 7: ಅಶೋಕ್ನಗರ ಬಳಿಯ ಕೋಡಿಕಲ್ ಸಮೀಪದ ಕಟ್ಟಡ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ.
ಡೊಂಗರಕೇರಿಯ ನಿವಾಸಿ ವಿದ್ಯಾಧರ ಸೇಠ್ (43) ಆತ್ಯಹತ್ಯೆಗೆ ಶರಣಾದವರು.
ಕೋಡಿಕಲ್ನಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ಅವರು, ಕೋಡಿಕಲ್ನ ಡಾಮಿನಿಕ್ ಚರ್ಚ್ ಬಳಿಯಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಉರ್ವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.