×
Ad

ಬೈಕ್ ಢಿಕ್ಕಿ : ಪಾದಾಚಾರಿ ಮೃತ್ಯು

Update: 2016-12-07 21:59 IST

ಉಡುಪಿ, ಡಿ.7: ಅಂಗಡಿಯಿಂದ ತರಕಾರಿ ಖರೀದಿಸಿ ಮನೆಗೆ ತೆರಳುವ ಸಿದ್ಧತೆಯಲ್ಲಿ ರಸ್ತೆ ದಾಟಲು ನಿಂತಿದ್ದ ವೃದ್ಧರೊಬ್ಬರಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗದಲ್ಲಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.

ಮೃತರನ್ನು ಶಿವಳ್ಳಿ ಗ್ರಾಮದ ಕಕ್ಕುಂಜೆಯ ರವೀಂದ್ರ ಶ್ಯಾನ್‌ಭಾಗ್ (76) ಎಂದು ಗುರುತಿಸಲಾಗಿದೆ.

ಇವರು ಇಂದು  ಅಂಬಾಗಿಲಿನ ಶ್ಯಾಂ ಸರ್ಕಲ್ ಬಳಿ ನಾಗಯಕ್ಷಿ ಜನರಲ್ ಸ್ಟೋರ್‌ನಿಂದ ತರಕಾರಿ ಖರೀದಿಸಿ ಎದುರಿನ ರಸ್ತೆಯ ಬದಿಯಲ್ಲಿ ರಸ್ತೆ ದಾಟಲು ನಿಂತಿದ್ದಾಗ ಪೆರಂಪಳ್ಳಿ ಕಡೆಯಿಂದ ವೇಗವಾಗಿ ಬಂದ ಮೋಟಾರು ಸೈಕಲ್ ಡಿಕ್ಕಿ ಹೊಡೆದಿತ್ತು. ಇದರಿಂದ ರಸ್ತೆಗೆ ಬಿದ್ದು ತಲೆಗೆ ತೀವ್ರವಾಗಿ ಪೆಟ್ಟು ಬಿದ್ದ ಶ್ಯಾನ್‌ಭಾಗ್‌ರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕೊಂಡೊಯ್ಯುವಾಗ ಮೃತಪಟ್ಟಿದ್ದಾರೆ. ಮೃತರನ್ನು ಶಿವಳ್ಳಿ ಗ್ರಾಮದ ಕಕ್ಕುಂಜೆಯ ರವೀಂದ್ರ ಶ್ಯಾನ್‌ಬಾಗ್(76)ಎಂದು ಗುರುತಿಸಲಾಗಿದೆ.

ಇವರು ಇಂದು ಬೆಳಗ್ಗೆ 10ಗಂಟೆ ಸುಮಾರಿಗೆ ಅಂಬಾಗಿಲಿನ ಶ್ಯಾಂಸರ್ಕಲ್‌ ಬಳಿ ನಾಗಯಕ್ಷಿ ಜನರಲ್‌ ಸ್ಟೋರ್‌ನಿಂದ ತರಕಾರಿ ಖರೀದಿಸಿ ಎದುರಿನ ರಸ್ತೆಯ ಬದಿಯಲ್ಲಿ ರಸ್ತೆದಾಟಲು ನಿಂತಿದ್ದಾಗ ಪೆರಂಪಳ್ಳಿ ಕಡೆಯಿಂದ ವೇಗವಾಗಿ ಬಂದ ಮೋಟಾರು ಸೈಕಲ್‌ ಢಿಕ್ಕಿ ಹೊಡೆದಿತ್ತು.

ಇದರಿಂದ ರಸ್ತೆಗೆ ಬಿದ್ದು ತಲೆಗೆ ತೀವ್ರವಾಗಿ ಪೆಟ್ಟುಬಿದ್ದ ಶ್ಯಾನ್‌ಬಾಗ್‌ರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕೊಂಡೊಯ್ಯುವಾಗ ಮೃತಪಟ್ಟಿದ್ದಾರೆ.

ಮೋಟಾರ್ ಸೈಕಲ್ ಸವಾರ ಪ್ರಶಾಂತ್ ಹಾಗೂ ಸಹಸವಾರ ಪ್ರಸಾದ್‌ಗೂ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News