ಸ್ನಾನ ಮಾಡುತ್ತಿದ್ದ ಯುವಕ ಮುಳುಗಿ ಸಾವು
Update: 2016-12-08 17:04 IST
ಉಪ್ಪಿನಂಗಡಿ , ಡಿ.8 : ಕುಮಾರಧಾರ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಯುವಕನಬ್ಬ ಸಾವನ್ನಪ್ಪಿರುವ ಘಟನೆ ಇಂದಿಲ್ಲಿ ನಡೆದಿದೆ.
ಸಕಲೇಶಪುರ ನಿವಾಸಿ ವಿಜಯ (25) ಮೃತಪಟ್ಟವರು .
ಏಳು ಮಂದಿ ಗೆಳೆಯರೊಂದಿಗೆ ಉಪ್ಪಿನಂಗಡಿ ಬಳಿ ಕುಮಾರಧಾರ ನದಿಯಲ್ಲಿ ಸ್ನಾನಕ್ಕೆ ಬಂದಿದ್ದ ವಿಜಯ್, ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.