ದತ್ತಜಯಂತಿ: ಲಘು ವಾಹನ ಬಳಕೆಗೆ ಸೂಚನೆ

Update: 2016-12-10 14:27 GMT

ಮಂಗಳೂರು, ಡಿ. 10: ಡಿಸೆಂಬರ್ 12 ಮತ್ತು 13ರಂದು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹಾಗೂ ಚಿಕ್ಕಮಗಳೂರು ತಾಲೂಕು ಶ್ರೀ ಗುರುದತ್ತಾತ್ರೇಯ ಬಾಬಾಬುಡಾನ್ ದರ್ಗಾದಲ್ಲಿ ದತ್ತಿಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿರುವುದರಿಂದ ವಾಹನ ಸುಗಮ ಸಂಚಾರಕ್ಕೆ ಲಘು ವಾಹನದಲ್ಲಿ ಆಗಮಿಸುವಂತೆ ಕೋರಲಾಗಿದೆ.

ದರ್ಗಾ ಸಂಸ್ಥೆಗೆ ಹೋಗುವ ಮಾರ್ಗವು ತಿರುವಿಗಳಿಂದ ಕೂಡಿರುವುದರಿಂದ ಸದ್ರಿ ಮಾರ್ಗದಲ್ಲಿ ಭಾರೀ ವಾಹನ ಸಂಚಾರ ಕಷ್ಟಸಾಧ್ಯವಾಗಲಿದೆ. ಆದ್ದರಿಂದ ಜಿಲ್ಲಾ ವ್ಯಾಪ್ತಿಯಿಂದ ಆಗಮಿಸುವ ಭಕ್ತಾದಿಗಳು ಲಘು ವಾಹನದಲ್ಲಿ ಆಗಮಿಸುವಂತೆ ಜಿಲ್ಲಾಧಿಕಾರಿಯವರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News