ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

Update: 2016-12-10 18:17 GMT

ಉಡುಪಿ, ಡಿ.10: ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ವತಿಯಿಂದ ಪ್ರಬಂಧ ಸ್ಪರ್ಧೆಯನ್ನು ಜ.7ರಂದು ಅಪರಾಹ್ನ 3 ಗಂಟೆಗೆ ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್‌ನಲ್ಲಿ ಏರ್ಪಡಿಸಲಾಗಿದೆ.

‘ನನ್ನ ಜೀವನದ ಉದ್ದೇಶ’ ಎಂಬ ವಿಷಯದ ಕುರಿತ ಒಂದು ಗಂಟೆ ಅವಧಿಯ ಈ ಸ್ಪರ್ಧೆಯಲ್ಲಿ ಜಿಲ್ಲೆಯ 8 ಮತ್ತು 9ನೆ ತರಗತಿಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ. ವಿಜೇತ ರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕರ ಬಹುಮಾನ ನೀಡಲಾಗುವುದು. ಆಸಕ್ತರು ಡಿ.20ರೊಳಗೆ ಶಾಲೆಯ ಮೂಲಕ ಮರಿಯಾ ಕೃಪಾ, ಹೌಸ್ ನಂಬರ್ 16-181ಎನ್2(ಎ), ಕ್ರಿಸ್ಟ್ ಚರ್ಚ್‌ನ ಹಿಂಬದಿ, ಅಲೆವೂರು ರಸ್ತೆ, ಮಣಿಪಾಲ-576104 ಈ ವಿಳಾಸದಲ್ಲಿ ಹೆಸರನ್ನು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷ ಖಲೀಲ್ ಅಹ್ಮದ್ (9449180465), ಸಂಯೋಜಕ ಆಲ್ಫೋನ್ಸ್ ಡಿಕೋಸ್ತ(9740936452), ಕಾರ್ಯದರ್ಶಿ ಲುವಿಸ್ ಡಿ ಅಲ್ಮೇಡಾ (9481539722) ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News