ಮೀಲಾದುನ್ನಬಿ: ಸಂಚಾರದಲ್ಲಿ ಬದಲಾವಣೆ

Update: 2016-12-11 16:52 GMT

ಮಂಗಳೂರು, ಡಿ. 11: ದ.ಕ. ಜಿಲ್ಲೆಯಲ್ಲಿ ಡಿ. 12ರಂದು ನಡೆಯು ಮೀಲಾದುನ್ನಬಿ ಪ್ರಯುಕ್ತ ಸಂಜೆ 4 ಗಂಟೆಗೆ ಬಾವುಟಗುಡ್ಡೆ ಈದ್ಗಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುವುದರಿಂದ ಕೆಲವು ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.

ಸಂಜೆ 4 ಗಂಟೆಯಿಂದ ಪ್ರಾರ್ಥನೆ ಮುಗಿದು ಜನರು ಮತ್ತು ವಾಹನಗಳು ತೆರಳುವ ತನಕ,  ಹಂಪನಕಟ್ಟೆಯಿಂದ ಬಾವುಟಗುಡ್ಡೆಯ ಮುಖಾಂತರ ಡಾ.ಅಂಬೇಡ್ಕರ್ ವೃತ್ತಕ್ಕೆ ಚಲಿಸಬೇಕಾದ ವಾಹನಗಳು ಕೆ. ಎಸ್. ಆರ್. ರಸ್ತೆ ಅಥವಾ ಎಲ್. ಎಚ್. ಎಚ್. ಮುಖಾಂತರ ಫಳ್ನೀರ್ ರಸ್ತೆಯ ಮೂಲಕ ಸಂಚರಿಸುವುದು.

ಅದೇ ರೀತಿ ಅರವಿಂದ ಕಡೆಯಿಂದ, ಡಾ. ಅಂಬೇಡ್ಕರ್ ವೃತ್ತದ ಕಡೆಯಿಂದ, ಸಿಟಿ ಸೆಂಟರ್‌ನಿಂದ ಬಾವುಟಗುಡ್ಡೆಗೆ ಬರುವ ರಸ್ತೆ, (ಕೆಎಸ್‌ಆರ್ ರಸ್ತೆಯಿಂದ) ಹಾಗೂ ಸಿಟಿ ಸೆಂಟರ್ ಪಾರ್ಕಿಂಗ್‌ನಿಂದ ಬಾವುಟಗುಡ್ಡೆಗೆ ಬರುವ ರಸ್ತೆಗಳಲ್ಲಿ ಮೇಲ್ಕಾಣಿಸಿದ ಸಮಯದಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಬಾವುಟಗುಡ್ಡೆ ರಸ್ತೆಯಲ್ಲಿ ಸಾಧ್ಯವಾದಷ್ಟು ರಸ್ತೆಯ ಬದಿಯಲ್ಲಿ ವಾಹನಗಳನ್ನು 45 ಡಿಗ್ರಿ ಕೋನದಲ್ಲಿ ತಾತ್ಕಾಲಿಕವಾಗಿ ಪಾರ್ಕ್ ಮಾಡಬೇಕಿದೆ. ನಂತರ ಹಂಪನಕಟ್ಟೆಯಿಂದಲೇ ವಾಹನಗಳ ಸಂಚಾರವನ್ನು ತಡೆ ಹಿಡಿಯುವುದು.

ಅದೇ ರೀತಿ ನಗರ ಕೇಂದ್ರ ಗ್ರಂಥಾಲಯದಿಂದ ವಿಜಯಾ ಬ್ಯಾಂಕ್ ತನಕ ರಸ್ತೆಯ ಎಡಬದಿ ಮಾತ್ರ ವಾಹನಗಳನ್ನು ತಾತ್ಕಾಲಿಕವಾಗಿ ಪಾರ್ಕ್ ಮಾಡುವುದು.

ಮೇಲಿನ ಈ ನಿರ್ಬಂದನೆಗಳು ವಿ.ಐ.ಪಿ. ವಾಹನಗಳು, ಪೊಲೀಸ್ ವಾಹನಗಳು ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News