ಉಡುಪಿ ಜಿಲ್ಲಾ ಜೆಡಿಎಸ್‌ಗೆ ನೂತನ ಸಾರಥಿ

Update: 2016-12-11 18:16 GMT

ಪಡುಬಿದ್ರಿ, ಡಿ.11 : ಉಡುಪಿ ಜಿಲ್ಲಾ ಜೆಡಿಎಸ್‌ಗೆ ಅಧ್ಯಕ್ಷರಾಗಿ ಕಾಪು ಯೋಗೀಶ್ ವಿ.ಶೆಟ್ಟಿ ಬಾಲಾಜಿ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಅರೆಮನೆ ಮೈದಾನದಲ್ಲಿ ಜರಗಿದ ರಾಜ್ಯಕಾರಿಣಿ ಸಭೆಯಲ್ಲಿ ಜಾತ್ಯಾತೀತ ಜನತಾದಳದ ರಾಜ್ಯಧ್ಯಕ್ಷರಾದ ಎಚ್.ಡಿ.ಕುಮಾರ ಸ್ವಾಮಿಯವರು ಉಡುಪಿ ಜಿಲ್ಲೆಯ ಅಧ್ಯಕ್ಷರನ್ನಾಗಿ ಯೋಗೀಶ್ ಶೆಟ್ಟಿಯವರನ್ನು ಆಯ್ಕೆ ಮಾಡಿರುತ್ತಾರೆ.

22 ವರ್ಷಗಳ ಸುದೀರ್ಘ ಕಾಲ ಜಾತ್ಯಾತೀತ ಜನತಾದಳದ ಕಾರ್ಯಕರ್ತರಾಗಿ, ಹಲವು ಹಂತದ ನಾಯಕನಾರಾಗಿ, ಕಾಪು ಕ್ಷೇತ್ರ ಜಾತ್ಯಾತೀತ ಜನತಾದಳದ ಅಧ್ಯಕ್ಷರಾಗಿ, ಕಾಪು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಲಯನ್ಸ್‌ಕ್ಲಬ್ ನಾಯಕರಾಗಿ, ಸರ್ವಕಾಲೇಜು ವಿದ್ಯಾರ್ಥಿ ಸಂಘದ ನಾಯಕರಾಗಿ, ಬಂಟರ ಸಂಘದ ನಾಯಕರಾಗಿ, ಉದ್ಯಮಿ, ಸಾಮಾಜಿ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಸೇವೆಸಲ್ಲಿಸಿದ್ದರು.

ಸುದೀರ್ಘ ಕಾಲ ಉಡುಪಿ ಜಿಲ್ಲೆಯ ಜೆಡಿಎಸ್ ಅಧ್ಯಕ್ಷರಾಗಿದ್ದ ಬೆಳಪು ದೇವಿಪ್ರಸಾದ್ ಶೆಟ್ಟಿಯವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಬಳಿಕ ದಕ್ಷತ್ ಶೆಟ್ಟಿಯವರನ್ನು ಅಧ್ಯಕ್ಷರನ್ನಾಗಿ ಕಳೆದ ವರ್ಷ ಆಯ್ಕೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News