ಮಾತ್ರೆ ಬದಲು ವಿಷ ಸೇವಿಸಿ ಮೃತ್ಯು
Update: 2016-12-13 17:27 GMT
ಕಾರ್ಕಳ, ಡಿ.13: ಕೆಲ ದಿನಗಳ ಹಿಂದೆ ತಲೆ ನೋವಿನ ಬಗ್ಗೆ ಮಾತ್ರ ತೆಗೆದುಕೊಳ್ಳುವ ಬದಲು ಕೈತಪ್ಪಿನಿಂದ ಅಡಿಕೆ ಮರಕ್ಕೆ ಹಾಕುವ ಮೈಲ್ ತುತ್ತನ್ನು ಸೇವಿಸಿ ಅಸ್ವಸ್ಥಗೊಂಡ ಈದು ಕಂಬಳದಡ್ಡ ನಿವಾಸಿ ದೇವಪ್ಪದಾಸ್ (45) ಎಂಬವರು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ಡಿ.13ರಂದು ಬೆಳಗ್ಗೆ 7:15ರ ಸುಮಾರಿಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.