ರಾಹುಲ್ ಪ್ರಧಾನಿಯನ್ನೇಕೆ ಬಯಲಿಗೆಳೆಯುತ್ತಿಲ್ಲ?:ಕೇಜ್ರಿ

Update: 2016-12-14 14:17 GMT

ಹೊಸದಿಲ್ಲಿ,ಡಿ.14: ಪ್ರಧಾನಿ ನರೇಂದ್ರ ಮೋದಿಯವರ ಭ್ರಷ್ಟಾಚಾರದ ಬಗ್ಗೆ ದಾಖಲೆಯಿದ್ದರೆ ಅದನ್ನು ಬಹಿರಂಗಗೊಳಿಸುವಂತೆ ಇಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಸವಾಲು ಹಾಕಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಇಂತಹ ‘ಫ್ರೆಂಡ್ಲಿ ಮ್ಯಾಚ್’ಗಳನ್ನು ಆಡುತ್ತಿರುತ್ತವೆ.

ಕಾಂಗ್ರೆಸ್ ವಿರುದ್ಧ ತನ್ನ ಬಳಿ ಆಗಸ್ಟಾ ವೆಸ್ಟಲ್ಯಾಂಡ್ ಪ್ರಕರಣವಿದೆ ಎಂದು ಬಿಜೆಪಿ ಹೇಳುತ್ತಿದ್ದರೆ, ಬಿಜೆಪಿ ವಿರುದ್ಧ ತನ್ನ ಬಳಿ ಸಹಾರಾ/ಬಿರ್ಲಾ ಪ್ರಕರಣಗಳಿವೆ ಎಂದು ಕಾಂಗ್ರೆಸ್ ಹೇಳುತ್ತಿದೆ.ಆದರೆ ಯಾರೂ ಏನನ್ನೂ ಬಹಿರಂಗಗೊಳಿಸುವುದಿಲ್ಲ ಎಂದು ಕುಟುಕಿದ್ದಾರೆ.

ನಿಜಕ್ಕೂ ರಾಹುಲ್ ಬಳಿ ಮೋದಿಯವರು ವೈಯಕ್ತಿಕವಾಗಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ದಾಖಲೆಗಳಿದ್ದರೆ ಅವರು ಅದನ್ನು ಸಂಸತ್ತಿನ ಹೊರಗೇಕೆ ಬಹಿರಂಗಗೊಳಿಸುತ್ತಿಲ್ಲ ಎಂದು ಸರಣಿ ಟ್ವೀಟ್‌ಗಳಲ್ಲಿ ಕೇಜ್ರಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News