ಕಾರ್ನಾಡು : ಕಾರುಗಳ ನಡುವೆ ಅಪಘಾತ

Update: 2016-12-14 16:40 GMT

ಮುಲ್ಕಿ, ಡಿ.14: ರಾಷ್ಟ್ರೀಯ ಹೆದ್ದಾರಿ 66ರ ಕಾರ್ನಾಡು ಬೈಪಾಸ್ ಬಳಿ ಕಾರುಗಳ ನಡುವೆ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ನಾಲ್ವರು ಅಪಾಯದಿಂದ ಪಾರಾದ ಘಟನೆ ಬುಧವಾರ ನಡೆದಿದೆ.

    ಕಾರ್ಣಾಡು ಬೈಪಾಸ್‌ನ ಮಾರುತಿ ಶೋರೂಂನ ಬಳಿ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ವ್ಯಾಗನರ್ ಕಾರಿಗೆ ಕಾರ್ನಾಡು ಒಳ ಪೇಟೆಯಿಂದ ಹೆದ್ದಾರಿ ಕಡೆಗೆ ಬರುತ್ತಿದ್ದ ಆಸ್ಟಾ ಗ್ರಾಂಡ್ ಕಾರು ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಹೆದ್ದಾರಿಯ ತೀರಾ ಎಡಭಾಗಕ್ಕೆ ಚಲಿಸಿ ಹೆದ್ದಾರಿಯ ಮೈಲುಗಲ್ಲಿಗೆ ಢಿಕ್ಕಿ ಹೊಡೆದಿದೆ.

  ವ್ಯಾಗನರ್ ಕಾರಿನಲ್ಲಿ ಭದ್ರಾವತಿ ಮೂಲದ ಸುಭಾಷ್ ಎಂಬವರ ಕುಟುಂಬರ ಪ್ರಯಾಣಿಸುತ್ತಿದ್ದು, ಪವಾಡಸದೃಶ ಪಾರಾಗಿದ್ದಾರೆ. ಆಸ್ಟಾ ಕಾರಿನಲ್ಲಿದ್ದ ಚಾಲಕ ಕಾರ್ನಾಡು ಮೂಲದ ರಝಾಕ್ ಕೂಡ ಅಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಅಪಘಾತದಿಂದ ಹೆದ್ದಾರಿ ಸಂಚಾರ ಕೆಲ ಸಮಯ ವ್ಯತ್ಯಗೊಂಡಿತು. ಸುರತ್ಕಲ್ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೋಮಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News