ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2016-12-15 18:43 GMT

ಕಾರ್ಕಳ, ಡಿ.15: ವೈಯಕ್ತಿಕ ಕಾರಣದಿಂದ ಮನನೊಂದ ಕುಕ್ಕಂದೂರು ನಿವಾಸಿ ಬೆನಡಿಕ್ಟ್ ಮಥಾಯಸ್ ಎಂಬವರ ಮಗ ವಲೇರಿಯನ್ ಮಥಾಯಸ್(41) ಬುಧವಾರ ರಾತ್ರಿ ಮನೆಯ ಹಾಲ್‌ನಲ್ಲಿರುವ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗಂಗೊಳ್ಳಿ: ವಿಪರೀತ ಕುಡಿತದ ಚಟ ಹೊಂದಿದ್ದ ಗುಜ್ಜಾಡಿ ನಿವಾಸಿ ಬಸವ ಎಂಬವರ ಮಗ ನಾಗರಾಜ(28) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಗುರುವಾರ ರಾತ್ರಿ ಮನೆಯ ಪಕ್ಕದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News