ಬಹರೈನ್: ವಿಶ್ವ ಇಸ್ಲಾಮಿಕ್ ಬ್ಯಾಂಕಿಂಗ್ ಸಮ್ಮೇಳನದಲ್ಲಿ ಡಾ.ಹಬೀಬ್ ರಹ್ಮಾನ್
ಮಂಗಳೂರು, ಡಿ.16: ಮಂಗಳೂರಿನ ಯುನಿಟಿ ಕೇರ್ ಆ್ಯಂಡ್ ಹೆಲ್ತ್ ಸರ್ವಿಸಸ್ ಅಧ್ಯಕ್ಷ ಹಾಗೂ ವೈದ್ಯಕೀಯ ನಿರ್ದೇಶಕ ಡಾ.ಸಿ.ಪಿ.ಹಬೀಬ್ ರಹ್ಮಾನ್ ಇತ್ತೀಚೆಗೆ ಬಹರೈನ್ನಲ್ಲಿ ನಡೆದ ವರ್ಲ್ಡ್ ಇಸ್ಲಾಮಿಕ್ ಬ್ಯಾಂಕಿಂಗ್ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.
ಈ ಸಮ್ಮೇಳನದ ಮುಖ್ಯ ಚರ್ಚಾ ವಿಷಯ ಅಥವಾ ಪರಿಕಲ್ಪನೆ ‘ಇಕನಾಮಿಕ್ ಅನ್ಸರ್ಟೆನಿಟೀಸ್: ವಿಜಿಲೆನ್ಸ್ ಆ್ಯಂಡ್ ಗ್ರೋತ್’ (ಆರ್ಥಿಕ ಅನಿಶ್ಚಿತತೆಗಳು: ವಿಚಕ್ಷಣೆ ಮತ್ತು ಬೆಳವಣಿಗೆ)ಆಗಿತ್ತು. ಈ ಆಶಯದಂತೆಯೇ ವಿಶ್ವ ಆರ್ಥಿಕತೆ ಪ್ರಸಕ್ತ ನಿರ್ಣಾಯಕ ಹಂತದಲ್ಲಿದ್ದು, ಈ ಹಂತದಲ್ಲಿ ವಿಶ್ವ ಇಸ್ಲಾಮಿಕ್ ಆರ್ಥಿಕ ಸಂಸ್ಥೆಗಳನ್ನು ಬಲಪಡಿಸುವ, ಅಭಿವೃದ್ಧಿಪಡಿಸುವ ಹಾಗೂ ಬೆಂಬಲಿಸುವ ಅಗತ್ಯವನ್ನು ಸಮ್ಮೇಳನದಲ್ಲಿ ಹೇಳಲಾಯಿತು. ವಿಶ್ವ ಆರ್ಥಿಕ ವ್ಯವಸ್ಥೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ನಾಯಕರಿಗೆ ಮಾಹಿತಿ ನೀಡಲಾಯಿತು.
ವಿಶ್ವಾದ್ಯಂತದ 40 ದೇಶಗಳಲ್ಲಿರುವ ಹಲವು ಇಸ್ಲಾಮಿಕ್ ಫೈನಾನ್ಸ್ ಸಂಸ್ಥೆಗಳಿಂದ ಪ್ರಮುಖ ಭಾಷಣಕಾರರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಆರ್ಥಿಕ ನಿಯಂತ್ರಕರು, ಸಿಸೂಟ್ ಬ್ಯಾಂಕರ್ಗಳು, ಅಸ್ಸೆಟ್ ಮ್ಯಾನೇಜರ್ಗಳು, ನೀತಿ ರಚನಾಕಾರರು, ಫಿನ್ಟೆಕ್ ಉದ್ಯಮಿಗಳು ಹಾಗೂ ಶಿಕ್ಷಣ ತಜ್ಞರು ಈ ಸಮ್ಮೇಳನದಲ್ಲಿ ಮಾತನಾಡಿದರು. ಇ್ಲಾಮಿಕ್ ಬ್ಯಾಂಕಿಂಗ್ ಮತ್ತು ಫೈನಾನ್ಸ್ ಮೂರು ಟ್ರಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಕ್ಷೇತ್ರವಾಗಿದೆ.
ಸಮ್ಮೇಳನದ ಮುಖ್ಯಪೋಷಕ ಬಹರೈನ್ ಪ್ರಧಾನಿ ಸಲಹೆಗಾರ ಸಲ್ಮಾನ್ ಬಿನ್ ಖಲೀಫಾ ಸಹಿತ ಇಸ್ಲಾಮಿಕ್ ಬ್ಯಾಂಕಿಂಗ್ ಕ್ಷೇತ್ರದ ಹಲವಾರು ಗಣ್ಯರೊಂದಿಗೆ ಡಾ.ಸಿ.ಪಿ.ಹಬೀಬ್ ರಹ್ಮಾನ್ ಮಾತುಕತೆ ನಡೆಸಿದರು.
1.3 ಬಿಲಿಯನ್ ಜನಸಂಖ್ಯೆಯಿರುವ ಭಾರತದಂತಹ ದೇಶದಲ್ಲಿ ಪ್ರಸಕ್ತ ಬದಲಾಗುತ್ತಿರುವ ಆರ್ಥಿಕ ವಾತಾ ವರಣದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್ಗೆ ಸರಕಾರ ಒಲವು ತೋರಿಸಿರುವುದರಿಂದ ಬಡ್ಡಿ ರಹಿತ ಇಸ್ಲಾಮಿಕ್ ಬ್ಯಾಂಕಿಂಗ್ ಮುಸ್ಲಿಮ್ ಸಮುದಾಯಕ್ಕೆ ಮಾತ್ರವಲ್ಲದೆ ಧರ್ಮಗಳ ಎಲ್ಲೆ ಮೀರಿ ಎಲ್ಲ ನಾಗರಿಕರಿಗೂ ಪ್ರಯೋಜನ ಕಾರಿಯಾಗಲಿರುವ ಬಗ್ಗೆ ಸಮ್ಮೇಳನದ ಗಮನ ಸೆಳೆದರು.