ಕೋಟೇಶ್ವರ- ಹಾಲಾಡಿ-ಆಗುಂಬೆ-ಶೃಂಗೇರಿ ರಸ್ತೆ ಮೇಲ್ದರ್ಜೆಗೆ

Update: 2016-12-16 18:29 GMT

 ಉಡುಪಿ, ಡಿ.16: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪ್ರಮುಖ ರಸ್ತೆಗಳಲ್ಲೊಂದಾದ ಕೋಟೇಶ್ವರ-ಹಾಲಾಡಿ-ಸೋಮೇಶ್ವರ-ಆಗುಂಬೆ-ಶೃಂಗೇರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಇಲಾಖೆ ಪೂರ್ವಾನುಮತಿ ನೀಡಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಈ ಭಾಗದ ಜನತೆಯ ಬಹುದಿನಗಳ ಬೇಡಿಕೆಯಾದ ರಾಷ್ಟ್ರೀಯ ಹೆದ್ದಾರಿ ಘೋಷಣೆಗೆ ಕೆಲವೊಂದು ಇಲಾಖಾ ನಿಯಮಗಳನ್ನು ಪೂರೈಸಿದ ತಕ್ಷಣ ಅಂತಿಮ ಅನುಮೋದನೆ ದೊರೆಯಲಿದೆ ಎಂದು ಶೋಭಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News