ಜಾತಿಗೆ ಮಹತ್ವ ನೀಡದೆ ಮಾನವೀಯತೆಗೆ ಒತ್ತು ನೀಡಿ: ನಿರ್ಮಲನಾ ಥಜಿ
Update: 2016-12-22 17:25 IST
ಮಂಗಳೂರು, ಡಿ.22: ಆಧುನಿಕ ಕಾಲದಲ್ಲಿ ಮಾನವೀಯತೆ ನಶಿಸುತ್ತಿದೆ. ಹಾಗಾಗಿ ಜಾತಿಗೆ ಮಹತ್ವ ನೀಡದೆ ಮಾನವೀಯತೆಗೆ ಒತ್ತು ನೀಡುವ ಅಗತ್ಯವಿದೆ ಎಂದು ಕದ್ರಿ ಯೋಗೇಶ್ವರ (ಜೋಗಿ) ಮಠದ ಪೀಠಾಧಿಪತಿ ನಿರ್ಮಲನಾಥಜಿ ಹೇಳಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ನ ದ.ಕ. ಜಿಲ್ಲಾ ಮತ್ತು ಮಂಗಳೂರ ಘಟಕ ಮತ್ತು ನಾಥ ಸಂಪ್ರದಾಯ ಪ್ರಚಾರ ಸಮಿತಿ ಜಂಟಿ ಆಶ್ರಯದಲ್ಲಿ ಕದ್ರಿ ಜೋಗಿ ಮಠದಲ್ಲಿ ನಡೆದ ಟೈಲರ್ಸ್ ಕೊಗ್ಗ ಜೋಗಿ, ಗಂಗಮ್ಮ ಸ್ಮರಣಾರ್ಥ ದಿ. ಆನಂದನಾಥರಿಂದ ಸ್ಥಾಪಿಸಲ್ಪಟ್ಟ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.