ಬಂಟ್ವಾಳ ತೌಹೀದ್ ಶಾಲೆಯ ವಾರ್ಷಿಕ ಕ್ರೀಡೋತ್ಸವ

Update: 2016-12-24 08:26 GMT

ವಿಟ್ಲ, ಡಿ.24: ಬಂಟ್ವಾಳ-ಕೆಳಗಿನಪೇಟೆಯ ತೌಹೀದ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡೋತ್ಸವವು ಇತ್ತೀಚೆಗೆ ನಡೆಯಿತು. ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಸುಧಾಕರ್ ಧ್ವಜಾರೋಹಣಗೈದರು. ಪುರಸಭಾ ಸದಸ್ಯ ಮೂನಿಶ್ ಅಲಿ ಅಹ್ಮದ್ ಉದ್ಘಾಟಿಸಿದರು.

ಈ ಸಂದರ್ಭ ಶಾಲಾ ಸಂಚಾಲಕ ಹಾಜಿ ಮುಹಮ್ಮದಲಿ, ಅಧ್ಯಕ್ಷ ಹಾಜಿ ಬಿ.ಎ.ಸುಲೈಮಾನ್, ಕಾರ್ಯದರ್ಶಿ ಹಾಜಿ ಬಿ.ಎ.ಮುಹಮ್ಮದ್, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶಬೀರ್ ಅಹ್ಮದ್, ಶಾಲಾ ಮುಖ್ಯ ಶಿಕ್ಷಕರಾದ ಮೆಟಿಲ್ಡಾ ಡಿಕೋಸ್ತಾ, ಮಮತಾ ಸುವರ್ಣ, ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್, ಸಹ ಶಿಕ್ಷಕರಾದ ಮಲ್ಲಿಕಾ, ಡ್ಯಾಗ್ನ್ನಿ, ಭವ್ಯಾ, ಪ್ರಫುಲ್ಲಾ, ಮೆಹನಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News