×
Ad

ಈ ಮದುವೆ ಅನ್ನೋದು ನಿಲ್ಲಬೇಕು: ಮೀನಾಕ್ಷಿ ಬಾಳಿ

Update: 2016-12-24 19:39 IST

ಮಂಗಳೂರು, ಡಿ.24: ಹೆಣ್ಣಿನ ಮೇಲೆ ಸಾಮಾಜಿಕ ದೌರ್ಜನ್ಯ ನಡೆಸಲಾಗುತ್ತಿದೆ. ನೀನು ಮಾತೆ, ಗೃಹಿಣಿ ಎಂದೆಲ್ಲ ಹೆಣ್ಣನ್ನು ಸೀಮಿತಗೊಳಿಸಿ ದಬ್ಬಾಳಿಕೆ ಮಾಡಲೆಂದೇ ಮದುವೆಯನ್ನು ಅವರ ಮೇಲೆ ಹೇರಲಾಗಿದೆ. ಮಹಿಳೆಯರು ಪ್ರಗತಿ ಹೊಂದಬೇಕಾದರೆ ಈ ಮದುವೆ ಎಂಬ ಪದ್ಧತಿಯನ್ನು ಕೈ ಬಿಡಬೇಕು ಎಂದು ಸಾಮಾಜಿಕ ಹೋರಾಟಗಾರ್ತಿ, ಚಿಂತಕಿ ಡಾ. ಮೀನಾಕ್ಷಿ ಬಾಳಿ ಅಭಿಪ್ರಾಯಪಟ್ಟರು.

ನಗರದ ನಂತೂರಿನ ಶಾಂತಿಕಿರಣ ಸಭಾಂಗಣದಲ್ಲಿ ಶನಿವಾರ ಆರಂಭವಾದ ಜನನುಡಿ-2016 ಸಾಹಿತ್ಯ ಸಮಾವೇಶದಲ್ಲಿ ಅವರು ನಿರ್ವಚನೆಯೊಂದಿಗೆ ಬಸಮ್ಮ ಸ್ಥಾವರ ಮಠ ಅಕ್ಕಲಕೋಟಿ ತಂಡದೊಂದಿಗೆ ತತ್ತ್ವಪದಗಳ ಗಾಯನ ನಡೆಸಿಕೊಟ್ಟು ‘ತತ್ವಪದಗಳ’ ವಿಶ್ಲೇಷಣೆಯೊಂದಿಗೆ ಮಾತನಾಡಿದರು.

ಭಾಷೆಗೆ ಮೈಲಿಗೆ ಎಂಬುದಿಲ್ಲ. ನುಡಿಗೆ ಮೈಲಿಗೆಯೂ ಇಲ್ಲ. ತತ್ವಪದಕಾರರೂ ಕೂಡ ಮೈಲಿಗೆ ಇಲ್ಲದ ಹಲವು ದರ್ಶನಗಳನ್ನು ಪ್ರತಿಪಾದಿಸಿದ ಅವರು, ತತ್ತ್ವಪದಗಳು ವೈದಿಕಷಾಹಿಯ ವಿರುದ್ಧ ಪ್ರಬಲವಾದ ಅಸ್ತ್ರವಾಗಿದೆ. ನಾವು ವೈಚಾರಿಕತೆಯ ಯೋಧರಾಗಬೇಕಾಗಿದೆ ಎಂದು ಕರೆ ನೀಡಿದರು.

ಬಸಮ್ಮ ಸ್ಥಾವರಮಠ ತಂಡದ ಗಾಯಕರು ಹಲವು ಅಪರೂಪದ, ಚಿಂತನಾರ್ಹ ತತ್ತ್ವಪದಗಳನ್ನು ಪ್ರಸ್ತುತಪಡಿಸಿದರು.

ನಿತಿನ್ ಕುತ್ತಾರ್ ಗೋಷ್ಠಿಯನ್ನು ನಿರೂಪಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News