ಅಮ್ಮೆಮಾರ್ ಕುಮರುಂ ಪುತ್ತೂರು ಉಸ್ತಾದ್ ಅನುಸ್ಮರಣೆ
Update: 2016-12-27 17:53 IST
ಬಂಟ್ವಾಳ , ಡಿ.27 : ಬದ್ರಿಯಾ ಜುಮ್ಮಾ ಮಸ್ಜಿದ್ ಅಮೇಮಾರ್ ಇದರ ಆಶ್ರಯದಲ್ಲಿ ಇತ್ತೀಚೆಗೆ ನಿದನರಾದ ಸಮಸ್ತ ಕೇರಳ ಜಮ್ ಯಿಯ್ಯತುಲ್ ಉಲಮಾ ಇದರ ಅಧ್ಯಕ್ಷ ಎ.ಪಿ. ಮೊಹಮ್ಮದ್ ಮುಸ್ಲಿಯಾರ್ ಕುಮರುಂ ಪುತ್ತೂರು ರವರ ಅನುಸ್ಮರಣೆ ಬದ್ರಿಯಾ ಮದರಸ ಅಮ್ಮೆಮಾರ್ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿಯ ಅಧ್ಯಕ್ಷ ಉಮರಬ್ಬ ಎ.ಎಸ್.ಬಿ ವಹಿಸಿದ್ದರು.
ಉದ್ಘಾಟನೆಯನ್ನು ಸೆಯ್ಯದ್ ಸಿರಾಜುದ್ದೀ ತಙಲ್ ಅಲ್ ಹಾದಿ ಅಲ್ ಫೈಝಿ ಮಾಡಿದರು. ಬಿ.ಜೆ.ಎಮ್.ಎ ಇದರ ಮುದರ್ರಿಸ್ ಅಬೂಸ್ವಾಲಿಹ್ ಫೈಝಿ , ಉಪಾಧ್ಯಕ್ಷ ಎಫ್.ಎ. ಖಾದರ್, ಸದರ್ ಮುಹಲ್ಲಿಂ ಸಿದ್ದೀಕ್ ಮೌಲವಿ, ಇಲ್ಯಾಸ್ ಮದನಿ, ಇಸಾಕ್ ಅರ್ಶದಿ, ರಝಾಕ್ ಅರ್ಶದಿ, ಅಶ್ರಫ್ ಝೈನಿ, ಅಬೂಬಕ್ಕರ್ ಮದನಿ ಉಪಸ್ಥಿತರಿದ್ದರು.